ಬಳ್ಳಾರಿ( 24) ಬಳ್ಳಾರಿ ಗ್ರಾಮಾಂತರ ವ್ಯಾಪ್ತಿಯ ವಿ.ಆರ್.ಕೆ.ಪಿ. ಸ್ಪಾಂಜ್ ಅಂಡ್ ಪವರ್ ಪ್ಲಾಂಟ್ ಎಲ್ಎಲ್ಪಿ ಹಲಕುಂದಿ ವತಿಯಿಂದ ಹಲಕುಂದಿ ಗ್ರಾಮಪಂಚಾಯತಿ ವ್ಯಾಪ್ತಿಗೆ ಬರುವ ಮೂರು ಹಳ್ಳಿಗಳಾದ ಹಲಕುಂದಿ, ಹೊನ್ನಳ್ಳಿ ಮತ್ತು ಹೊನ್ನಳ್ಳಿ ತಾಂಡ ಸಾರ್ವಜನಿಕರ ತುರ್ತು ಸೇವೆಗಾಗಿ ಅಂಬ್ಯೂಲೆನ್ಸ್ ವಾಹನ ವನ್ನು ಕೊಡೆಗೆ ನೀಡಿದರು.ಗುರುವಾರ ಅರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ 8 ಲಕ್ಷ ಮೌಲ್ಯದ ಆಂಬುಲೆನ್ಸ್ ವಾಹನವನ್ನು ಸಕಲ ವೈದ್ಯಕಿಟ್ಟುಗಳೊಂದಿಗೆ ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಡಾಕ್ಟರ್ ರಮೇಶ್ ಬಾಬು ಜಿಲ್ಲಾ ಆರೋಗ್ಯಾಧಿಕಾರಿಗಳು, ಡಾಕ್ಟರ್ ಅಬ್ದುಲ್ಲಾ ತಾಲೂಕು ಆರೋಗ್ಯಾಧಿಕಾರಿಗಳು, ಡಾಕ್ಟರ್ ಸಂತೋಷ್ ಆಡಳಿತ ವೈಧ್ಯಾಧಿಕಾರಿಗಳು, ಶ್ರೀ. ಜಿ.ವಿಜಯ ಕುಮಾರ್ ಕಮ್ಯುನಿಟಿ ಹೆಲ್ತ್ ಆಫೀಸರ್ ಮತ್ತು ಹಲಕುಂದಿ ಗ್ರಾಮಪಂಚಾಯತಿಯಿಂದ ಶ್ರೀಮತಿ ಹೊನ್ನೂರಮ್ಮ ಅಧ್ಯಕ್ಷರು, ಶ್ರೀ. ಪ್ರಭಾಕರ ಪಿ.ಡಿ.ಓ., ಸದಸ್ಯರುಗಳಾದ ಶ್ರೀ.ಕೇಶವ, ಶಿವು, ಬುಡೇನ್ ಸಾಬ್, ಹಾಗೂ ಗ್ರಾಮದ ಮುಖಂಡರಾದ ಶ್ರೀ. ಕೆ.ಎಸ್.ಗಾದಿಲಿಂಗಪ್ಪ, ತಿಮ್ಮನಗೌಡ ಹಾಗೂ ಇತರರು ಹಾಜರಿದ್ದರು. ವಿ.ಆರ್.ಕೆ.ಪಿ. ಸ್ಪಾಂಜ್ ಅಂಡ್ ಪವರ್ ಪ್ಲಾಂಟ್ ಎಲ್ಎಲ್ಪಿ ಕಂಪನಿಯಿಂದ ಶ್ರೀ, ಎಂ.ಎನ್.ಸಂದೀಪ್ ಮ್ಯಾನೇಜರ್ ಹೆಚ್.ಆರ್. ಇಲಾಖೆ, ಶ್ರೀ. ಗೌರಿ ಪ್ರಸಾದ್ ಅಸೀಸ್ಟೆಂಟ್ ಜನರಲ್ ಮ್ಯಾನೇಜರ್ ಅಡ್ಮಿನ್ ಇಲಾಖೆ, ಶ್ರೀ.ಎಸ್.ಪೀರಾ ಸಾಬ್, ಪಿ.ಆರ್.ಓ. ಹೆಚ್.ಆರ್. ಇಲಾಖೆಯಿಂದ ಹಾಜರಿದ್ದು, ಸದರಿ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಜಿಲ್ಲಾ ಆರೋಗ್ಯಧಿಕಾರಿಗಳು ತಮ್ಮ ಭಾಷಣದಲ್ಲಿ ಸಾರ್ವಜನಿಕರಿಗೆ ಅಂಬ್ಯೂಲೆನ್ಸ್ ವಾಹನದ ಮಹತ್ವ ಏನು ಅದರ ಉಪಯೋಗವನ್ನು ಯಾವ ತರಹ ಪಡೆದುಕೊಳ್ಳಬೇಕೆಂಬುವುದರ ಬಗ್ಗೆ ತಮ್ಮ ಭಾಷಣದಲ್ಲಿ ತಿಳಿಸಿ ಸದರಿ ಅಂಬ್ಯೂಲೆನ್ಸ್ ವಾಹನವನ್ನು ಹಲಕುಂದಿ ಗ್ರಾಮಪಂಚಾಯತಿ ಅಧ್ಯಕ್ಷರ ಕೈಯಿಂದ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿ ಹಲಕುಂದಿ ಗ್ರಾಮಸ್ತರಿಗೆ ಅಂಬ್ಯೂಲೆನ್ಸ್ ವಾಹನದ ಸೇವೆಯನ್ನು ಉಪಯೋಗಿಸಿಕೊಳ್ಳಲು ಮೊಬೈಲ್ ನಂ.9035554088 ಸಂಖ್ಯೆಗೆ ಕರೆ ಮಾಡುವ ಮೂಲಕ ತುರ್ತು ಸೇವೆಯನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.