ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲು
ಬಳ್ಳಾರಿ,ಏ.17: ಸರ್ಕಾರಿ ನಿವೇಶನ ಒತ್ತುವರಿ ತೆರವು
ಮಾಡುವ ಜಿಲ್ಲಾಡಳಿತವು ಬಡವರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಅವರು ತೆರವುಗೊಳಿಸಿಕೊಳ್ಳಲು ಅವಕಾಶ ನೀಡಬೇಕಾಗಿತ್ತು ಎಂದು ಮಾಜಿ ಸಚಿವರು, ಬಿಜೆಪಿಯ ಹಿರಿಯ ಧುರೀಣರಾದ ಬಿ.ಶ್ರೀರಾಮಲು ಹೇಳಿದರು.
ಜಿಲ್ಲಾಡಳಿತವು ನಿನ್ನೆ ನಗರದ ಭತ್ರಿ ಕಾಲೋನಿಯ ಈಶ್ವರ ದೇವಸ್ಥಾನದ ಬಳಿ ಸರ್ಕಾರದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ ಮತ್ತು ಮನೆ ತೆರವು ಕಾರ್ಯಾಚರಣೆ ನಡೆಸಿತ್ತು. ಈ ಸ್ಥಳಕ್ಕೆ ಇಂದು ಭೇಟಿ ನೀಡಿದ ಮಾಜಿ ಸಂಸದರು, ಮಾಜಿ ಶಾಸಕರು ಆದ ಬಿ.ಶ್ರೀರಾಮುಲು ರವರು, ಜಿಲ್ಲಾಡಳಿತವು ನಗರದ
ವಿವಿಧ ಪ್ರದೇಶಗಳಲ್ಲಿ ಸರ್ಕಾರಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿರುವುದು ಸರಿಯಷ್ಟೆ, ಆದ-'ರೆ, ಸರ್ಕಾರದ ಜಾಗದಲ್ಲಿ ಬಡವರು ಶೆಡ್ ಗಳನ್ನು ಹಾಕಿಕೊಂಡು ಬದುಕು ನಡೆಸುತ್ತಿದ್ದಾರೆ. ಅಂತಹವ ರಿಗೆ ಜಿಲ್ಲಾಡಳಿತವು ನೋಟೀಸ್ ನೀಡಿ, ತಾವೇ ತೆರವುಗೊಳಿಸಿಕೊಳ್ಳಬೇಕೆಂದು ತಿಳಿಸಿ, ಕಾಲಾವಕಾಶ ನೀಡಬೇಕಾಗಿತ್ತು ಎಂದು ಅಭಿಪ್ರಾಯಪಟ್ಟ ಶ್ರೀರಾಮುಲುರವರು ಜಿಲ್ಲಾಡಳಿತವು విశాలవిశి ಕಾರ್ಯಾಚರಣೆ ನಡೆಸಿ, ಸರ್ಕಾರಿ ಜಾಗದಲ್ಲಿ ಶೆಡ್ಗಳನ್ನು ಹಾಕಿಕೊಂಡವರಿಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಭತ್ರಿ ಪ್ರದೇಶದ ನಾಗರೀಕರು, ಮಹಿಳೆಯರು. ಮಕ್ಕಳು ಇದ್ದರು.