ಸಾರ್ವಜನಿಕ ಪಡಿತರ ಅಕ್ಕಿ ಅಕ್ರಮ ಸಾಗಾಣಿಕೆ ಅಡ್ಡದ ಮೇಲೆ ದಾಳಿ ಮಾಡಿ 523 ಚೀಲ ಅಕ್ಕಿ ವಶಕ್ಕೆ ಪಡೆದ ಬಳ್ಳಾರಿ ಸಹಾಯಕ ಆಯುಕ್ತರಾದ ರಾಜೇಶ್ ಹೆಚ್.ಡಿ.* *ದಂಧೆ ಕೋರರಿಗೆ ನಡುಕ*
ಬಳ್ಳಾರಿ (23)ನಗರದ ಎಸ್.ಎಲ್.ಎನ್ ಮಾಲ್ ಬಳಿ ಇರುವ ಪುಲ್ಲಯ್ಯ ಕಾಂಪೌಂಡ್ ಒಳ ಆವರಣದಲ್ಲಿ ಅಕ್ರಮವಾಗಿ ಸಾರ್ವಜನಿಕ ಪಡಿತರ ವನ್ನು ಬಳ್ಳಾರಿ ಮೂಲದ pickup ವಾಹನಗಳ ಮೂಲಕ ಪಡಿತರ ಅಂಗಡಿಗಳಿಂದ ಅಕ್ರಮವಾಗಿ ಸಂಗ್ರಹಿಸಿ ಗುಜರಾತ್ ಮೂಲದ ದೊಡ್ಡ ಸರಕು ಸಾಗಣೆ ಲಾರಿಯಲ್ಲಿ ಸಾಗಾಣಿಕೆ ಮಾಡಲು ಸಣ್ಣ ವಾಹನ ದಿಂದ ದೊಡ್ಡ ಲಾರಿಗೆ ತುಂಬುವಾಗ ದಿನಾಂಕ 23.01.2026 ರಂದು ಮುಂಜಾನೆ ಸಮಯ ಸುಮಾರು 02.00 ಗಂಟೆಗೆ ಬಳ್ಳಾರಿ ಸಹಾಯಕ ಆಯುಕ್ತ ರಾಜೇಶ್ ಹೆಚ್ ಡಿ ರವರು ದಿಡೀರ್ ದಾಳಿ ಮಾಡಿ 523 ಚೀಲ ಅಕ್ಕಿ, ಒಂದು ದೊಡ್ಡ ಲಾರಿ, ಎರಡು pickup ವಾಹನ, ಇಬ್ಬರು ಗುಜರಾತ್ ಮೂಲದ ಚಾಲಕರು, ಬಳ್ಳಾರಿ ಮೂಲದ ಒಬ್ಬ ಚಾಲಕ, 5 ಮಂದಿ ಅಮಾಲಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಇನ್ನೂ ಒಬ್ಬ ಚಾಲಕ ಮತ್ತು 5 ಅಮಾಲಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ವಿಚಾರಣೆ ವೇಳೆ ಸದರಿ ಅಕ್ಕಿ ಚೀಲಗಳನ್ನು ಅಕ್ರಮವಾಗಿ ಗುಜರಾತ್ ರಾಜ್ಯಕ್ಕೆ ತೆಗೆದುಕೊಂಡು ಹೋಗಲು ತಯಾರಿ ಮಾಡುತ್ತಿರುವುದಾಗಿ ಗುಜರಾತ್ ಮೂಲದ ಚಾಲಕ ತಿಳಿಸಿದ್ದಾರೆ.
ಹಾಗೂ ಸದರಿ ಅಕ್ರಮ ಕೆಲಸವನ್ನು ಮಾಡಲು ಶ್ರೀಧರ ಎಂಬ ವ್ಯಕ್ತಿ ಕರೆ ತಂದಿರುವುದಾಗಿ ಸ್ಥಳದಲ್ಲಿ ಇದ್ದ ಅಮಾಲಿಗಳು ತಿಳಿಸಿದ್ದಾರೆ.
A.P.MC ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.
ಈ ಹಿಂದೆ ಸಹ ಬಳ್ಳಾರಿ ನಗರದಲ್ಲಿ ಅಕ್ಕಿಯ ಮೂಟೆಗಳನ್ನು ವಶಪಡಿಸಿಕೊಂಡು ದಂಧೆ ಕೊರರಿಗೆ ಬಿಸಿ ಮುಟ್ಟಿಸಿದ್ದರು ಸಹ ಮತ್ತೆ ಕೆಲವರು ಅದೇ ಚಾಳಿಯನ್ನು ಮುಂದುವರಿಸಿರುವುದರಿಂದ, ಅಕ್ರಮ ದಂಧೆಕೋರರ ವಿರುದ್ಧ ಕುದ್ದು ಎ.ಸಿ .ಹೆಚ್.ಡಿ. ರಾಜೇಶ್ ಅವರು ಫೀಲ್ಡ್ ಗೆ ಇಳಿದು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ನೇರವಾಗಿ ಸರ್ಕಾರದ ಪಡಿತರ ಚೀಲ ಗಳನ್ನು ಗುಜರಾತ್ ಗಾಡಿಗೆ ತುಂಬಲು ತಂದಿದ್ದಾರೆ ಅಂದ್ರೆ, ಯಲ್ಲಾ ಓಪನ್ ಎಂದು ಅರ್ಥ, ಇದು ಯಾವ ನ್ಯಾಯ ಬೆಲೆ ಅಂಗಡಿ, ಎಲ್ಲಿ ಇಂದ ತಂದಿದ್ದಾರೆ, ಆಹಾರ ಇಲಾಖೆ ಡಿ ಡಿ, ಏನು ಮಾಡುತಾರೆ, ಸಿಬ್ಬಂದಿಗಳು ಎಲ್ಲಿ ನಿದ್ದೆ ಮಾಡುತಾ ಇದ್ದಾರೆ ಎಂದು ಅನ್ನವದು ಪ್ರಶ್ನೆ ಆಗಿದೆ. ಅಕ್ರಮ ದಂದೆ ದಲ್ಲಿ ಡಿ ಡಿ ಗೆ ಯಲ್ಲಾ ಮಾಹಿತಿ ಇದೇ ಅನ್ನವದು,ಬಹಿರಂಗ ಸತ್ಯ. ನೂತನ ಎ ಸಿ ಗಾಳಿ ಗೆ ಜಿಲ್ಲೆ ಯಲ್ಲಿ ಚಳಿ ಜ್ವರ ಬಂದಿದೆ.ಅಸಲಿ ಕಥೆ.. ಏನು..??.
[video width="476" height="848" mp4="https://news9today.in/wp-content/uploads/2026/01/VID-20260123-WA0006.mp4"][/video]
[video width="476" height="848" mp4="https://news9today.in/wp-content/uploads/2026/01/VID-20260123-WA0005.mp4"][/video]
