*ಲಾಡುಗಳ ಲಡಾಯಿ!*
ಕಾಂಗ್ರೆಸ್ ನಲ್ಲಿ ವಾತಾವರಣ ಹೆಚ್ಚು ಕಡಿಮೆ ಇದೆ ಅದಕ್ಕೆ ಇವರು ಟಚ್ ಮಿ ಟಚ್ ಮಿ ಎಂದು ಬಳ್ಳಾರಿ ನಗರಕ್ಕೆ ಭೇಟಿಕೊಡುತ್ತಾರೆ, ಸಂತೋಷ್ ಸಂತೋಷ್ ಲಾಡ್ ಪ್ರೀತಿಯಿಂದ ಶ್ರೀರಾಮುಲು ಅವರಿಗೆ ಕಿಸ್ ಕಿಸ್!! ಕುರುಗೋಡು ತಾಲೂಕಿನಲ್ಲಿ ಮ್ಯಾಚುಗಳು!! ಅನಿಲ್ ಲಾಡು ಸೋಮಶೇಖರ್ ರೆಡ್ಡಿ ಜೊತೆಯಲ್ಲಿ ಕಾಣಿಸಿಕೊಂಡಿರುವುದು ಮುಂದಿನ ಇವರ ರಾಜಕೀಯ ನಡೆ ಆಶ್ಚರ್ಯದಾಯಕವಾಗಿದೆ,
ಅನಿಲ್ ಲಾಡ್ ಅವರು ಕಾಂಗ್ರೆಸ್ ರಾಜಕಾರಣಿಗಳು, ಬಳ್ಳಾರಿಯ ಜನರು ಅಮಾಯಕರು, ಕೆಲ ವರ್ಷಗಳ ಹಿಂದೆ ಪ್ರಥಮ ಬಾರಿಗೆ ಬಳ್ಳಾರಿ ನಗರಕ್ಕೆ ಸ್ಪರ್ಧಿಸಿದಾಗ ಅನಿಲ್ ಲಾಡ್ ಅವರು ಚುನಾವಣೆ ಮಾಡಿದ ಸಿನಿಮಾ ಬಳ್ಳಾರಿಯ ಸಾರ್ವಜನಿಕರು ನೋಡಿದ್ದಾರೆ, ಪದೇ ಪದೇ ರೆಡ್ಡಿಗಳ ದರ್ಬಾರು ಸಮಯದಲ್ಲಿ ನಾವು ಎಷ್ಟು ಕಷ್ಟಪಟ್ಟಿದ್ದೇವೆ ಎಂದು ತಮ್ಮ ಆಸ್ತಿಗಳಿಗೆ ಬೆಂಕಿಯನ್ನು ಹಚ್ಚಿದ್ದರು ಎಂದು ಹಳೆಯ ಸಿನಿಮಾ ಕಥೆ ಹೇಳುತ್ತಾರೆ, ರೆಡ್ಡಿಗಳೇ ಆಗಲಿ ರಾಮುಲೇ ಆಗಲಿ ಸಾರ್ವಜನಿಕರಿಗೆ ಬಳ್ಳಾರಿ ನಗರಕ್ಕೆ ಏನನ್ನು ಅಭಿವೃದ್ಧಿ ಮಾಡಿಲ್ಲ, ಈ ಜನಪ್ರತಿನಿಧಿಗಳ ನಾಟಕ ಬಳ್ಳಾರಿಯ ಪ್ರಜೆಗಳು ನೋಡುತ್ತಾ ಬಂದಿದ್ದಾರೆ, ಮುಂದಿನ ಚುನಾವಣೆಯ ದಿನಗಳಲ್ಲಿ ನಿಮ್ಮ ನಾಟಕದ ಕೊನೆಗೆ ಜನರ ತೀರ್ಪು ಬಂದೇ ಬರುತ್ತದೆ, ಮಾಜಿ ಶಾಸಕರು ಅನಿಲ್ ಲಾಡ್ ಅವರು ತಮಗೆ ಲಾಭ ಇದ್ದರೆ ಮಾತ್ರ ಬಳ್ಳಾರಿಗೆ ಆಗಮಿಸುತ್ತಾರೆ, ಆದ ನಂತರ ಬಳ್ಳಾರಿಯ ಅಡ್ರೆಸ್ ಅನ್ನು ಮರೆತುಬಿಡುತ್ತಾರೆ, ಸಿದ್ದರಾಮಯ್ಯನವರ ಪಾದಯಾತ್ರೆಯಲ್ಲಿ ಅಕ್ರಮವಾಗಿ ಸಂಡೂರಿನಲ್ಲಿ ಸಂಪಾದನೆ ಮಾಡಿಕೊಂಡು ಹೆಲಿಕ್ಯಾಪ್ಟರ್ ಮೂಲಕ ಗಿರ ಗಿರ ತಿರಿಗಿಸಿ ಜನರನ್ನು ಮರಳು ಮಾಡುವ ಇವರಂತ ನಾಟಕ ರಾಜಕಾರಣಿಗಳಿಗೆ ಜನರು ತೀರ್ಪು ಹೇಳಲು ಕಾಯುತ್ತಿದ್ದಾರೆ, ಪ್ರಸ್ತುತವಾಗಿ ಕಾಂಗ್ರೆಸ್ ಪಕ್ಷವು ಕಣ್ಣು ಮುಚ್ಚಿಕೊಂಡು ಇಂತಹ ರಾಜಕಾರಣಿಗಳಿಗೆ ಬಳ್ಳಾರಿ ನಗರದ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದ ಬಿ ಫಾರಂ ಟಿಕೆಟ್ ಕೊಟ್ಟರೆ ಅದು ಬಳ್ಳಾರಿ ಜನತೆಯ ಕರ್ಮ, ತಮ್ಮ ಪ್ರತಿಷ್ಠೆಗೆ ಹೇಳಿಕೊಳ್ಳಲು ಅಷ್ಟೇ ನಮ್ಮ ಬಳ್ಳಾರಿ ನಗರದ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನ ಅಂದುಕೊಂಡು ನೀವು ಚುನಾವಣೆ ಹತ್ತಿರ ಬಂದಾಗ ಬಳ್ಳಾರಿಗೆ ಭೇಟಿಕೊಟ್ಟು, ಬಣ್ಣದ ರಾಜಕೀಯವನ್ನು ಆರಂಭಿಸಬೇಡಿ, ನಮ್ಮ ಬಳ್ಳಾರಿ ನಗರದ ವಿಧಾನಸಭಾ ಕ್ಷೇತ್ರದ ಸ್ಥಾನವು ಒಬ್ಬ ಮೂಲ ಕಾಂಗ್ರೆಸ್ ಮತ್ತು ಒಬ್ಬ ಅಭಿಮಾನ ಒತ್ತ ಅಭ್ಯರ್ಥಿಗೆ ಸೀಮಿತವಾಗಬೇಕೆ ಹೊರತು, ಶ್ರೀಮಂತಿಕೆಯ ರಾಜಕಾರಣಿಗಳಲ್ಲ ಈಗಾಗಲೇ ಲಾಡುಗಳನ್ನು ನೋಡಿದ್ದಾರೆ ಬಳ್ಳಾರಿಯ ಜನತೆ ರೆಡ್ಡಿಗಳನ್ನು ನೋಡಿದ್ದಾರೆ ರೆಡ್ಡಿಗಳ ಬೆಂಬಲಕ್ಕೆ ನಿಂತ, ರಾಮುಲು ಅವರನ್ನು ಕೂಡ ನಮ್ಮ ಬಳ್ಳಾರಿಯ ಜನಗಳು ಅವರ ರಾಜಕೀಯವನ್ನು ಅಡಿಯಿಂದ ಮುಗಿಯುವವರೆಗೂ ನೋಡಿದ್ದಾರೆ, ರಾಜಕೀಯವಾಗಿ ಮುಂದಿನ ಭವಿಷ್ಯವನ್ನು ಅರಿತು ನಮ್ಮ ಬಳ್ಳಾರಿಯ ಹೆಸರನ್ನು ಹಾಳು ಮಾಡದೆ ತಾವು ಕೂಡ ಮೂಲ ಪಕ್ಷದ ಹೆಸರನ್ನು ಹೇಳಿಕೊಳ್ಳುವಂತಹ ರಾಜಕಾರಣಿಗಳಿಗೆ ಅವಕಾಶವನ್ನು ಕೊಡಿಸಿ, ನಿಮ್ಮಂತೆ ಪ್ರತಿಯೊಂದು ವಿಧಾನಸಭಾ ಚುನಾವಣೆಯಲ್ಲಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಬದಲಾಯಿಸುವ ರಾಜಕಾರಣಿಗಳು ಅಲ್ಲದೆ, ನಿಷ್ಠಾವಂತ ಅಭ್ಯರ್ಥಿಗೆ ನೀವು ಕೂಡ ಬೆಂಬಲಿಸಿ ರಾಜಕೀಯವಾಗಿ ಪಕ್ಷ ಯಾವುದೇ ಇರಲಿ, ಶ್ರೀಮಂತಿಕೆಯ ಹಣದಿಂದ ತಾವು ಪಕ್ಷದ ಹಿರಿಯರಲ್ಲಿ ತಮ್ಮ ಸ್ಥಾನ ಗಿಟ್ಟಿಸಿಕೊಳ್ಳಲು ಕಡ್ಡಿ ಆಡಿಸುವ ಕೆಲಸವನ್ನು ಮಾಡಬೇಡಿ, ಕಲಘಟಗಿಯಲ್ಲಿ ಸಂತೋಷ್ ಲಾಡ್ ಗೆ ಸಹಕಾರ ಮಾಡಿ ಇಲ್ಲವಾದರೆ ಸಂಡೂರಿನಲ್ಲಿ ಏನಾದರೂ ಮಾಡಿಕೊಳ್ಳಿ, ಒಟ್ಟಿನಲ್ಲಿ ಬಳ್ಳಾರಿಯಲ್ಲಿ ಮೂಲ ಕಾಂಗ್ರೆಸ್ಸಿಗರು ಮತ್ತು ಪಕ್ಷದಿಂದ ಪಕ್ಷಕ್ಕೆ ಹಾರುವ ರಾಜಕಾರಣಿಗಳಿಗೆ ಮೂಲೆಯಲ್ಲಿ ಕೂಡಿಸಲು ಬಳ್ಳಾರಿಯ ಜನತೆ ಸಜ್ಜಾಗಿದ್ದಾರೆ.