ದಿಶಾ ಮೀಟಿಂಗ್ ಅಂದ್ರೆ ಅಧಿಕಾರಿಗಳಗೆ ನಡುಕು, ಸಂಸದ, ತುಕಾರಾಮ್ ಹೊಡತ ಕ್ಕೆ ಮೈಂಡ್ ಬ್ಲಾಕ್. ಕಬ್ಬು ಬೆಳುದ ಅಧಿಕಾರಿಗಳುಗೆ ನೀರು ಹರಿಸಿದ. ಕಥೆ,ಪುರಾಣ, ನಿಲ್ಲಿಸಿ. ಜನರ ಗೋಸ್ಕರ ಕೆಲಸ ಮಾಡಿ.
ಬಳ್ಳಾರಿ (14) ಸೋಮವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣ ದಲ್ಲಿ ದಿಶಾ ಸಭೆಯನ್ನು,ಮಾಡಲಾಯತು, ಸಂಸದ ತುಕಾರಾಂ, ನೇತೃತ್ವವಹಿಸಲಾಗಿತ್ತು. MLC ಸತೀಶ್, ಶಾಸಕಿ ಅನ್ನಪೂರ್ಣ,ಜಿಲ್ಲಾ ಮಟ್ಟದ ಯಲ್ಲಾ ಅಧಿಕಾರಿಗಳು, ಹಾಜರಿದ್ದರು. ಸಾರ್ವಜನಿಕ ಅಹವಾಲು ಸ್ವೀಕಾರ ಮಾಡಿ, ಸಭೆ ಯನ್ನು ಆರಂಭ ಮಾಡಿದ್ದರು. ಸಂಸದರು ಕೇಳುವ ಪ್ರಶ್ನೆ ಗಳು ಗೆ 50% ಅಧಿಕಾರಿಗಳು ಬಳಿ ಉತ್ತರ ಇರಲಿಲ್ಲ.ಕಾಟಾಚಾರಕ್ಕೆ, ಕಾಪಿ ರೈಟ್ ಮಾಡಿಕೊಂಡು ಬಂದಿದ್ದರು. ಅದನ್ನು ಕಂಡ ಸಂಸದ, ಹುಗ್ರ ರೂಪಕ್ಕೆ ತಾಳಿದ್ದರು, ನೀವು ಏನು ಕೆಲಸ ಮಾಡುತಾ ಇದ್ದರೀ.ಒಂದು ಆದರೂ ಆಂಖ್ಯ ಸಂಖ್ಯ, ಗಳು ಮ್ಯಾಚ್ ಆಗುತ್ತಾ ಇದ್ದಾವೆ ಎಂದು, ಪ್ರಶ್ನೆ ಮಾಡಿದರು. ಇದೇ ಸಂದರ್ಭದಲ್ಲಿ, ಒಬ್ಬ ಅಧಿಕಾರಿ ಬಾರದೆ ಕಾಪಿ ರೈಟ್ ಬುಕ್ ದಿಂದ ತನ್ನ ಕಚೇರಿ ಮತ್ತೊಂದು ಅಧಿಕಾರಿ ಯನ್ನು ಕಳಸಿದ್ದ, ಅದನ್ನು ಕಂಡು ಹಿಡಿದ ತುಕಾರಾಮ್ ಅವರು, ನಿಮ್ಮ ಮೇಲಿನ ಅಧಿಕಾರಿ ಬರಬೇಕು ಎಂದು ಹೇಳಿ, ತಾವು ಹೊರಗೆ ಹೋಗಿ ಎಂದು, ಕಳಸಿ ಆಕ್ರೋಶ ವ್ಯಕ್ತಿಪಡಿಸಿದರು.
ನಾವು ಇಂಥಹ ರೀಲ್ಸ್ ನೋಡಲಾಗಿದೆ, ಇನ್ನು ಮುಂದೆ, ಸಂಬಂದಿಸಿದ ಅಧಿಕಾರಿಗಳು, ಬಂದಿಲ್ಲ ಅಂದರೇ , ಶಿಸ್ತು ಕ್ರಮಕ್ಕೆ ಒತ್ತಾಯ ಮಾಡಬೇಕು ಆಗುತ್ತೆ ಎಂದು ವಾರ್ನಿಗ್ ಕೊಟ್ಟರು.
ಇನ್ನು ಮುಂದೆ ತಾವು ಯಾವದೇ ಕಚೇರಿ, ವೀಕ್ಷಣೆ ಗೆ ಹೋದರೆ, ಅಲ್ಲಿಂದಲೇ ಫೋಟೋ, ನಮಗೆ ಹಾಕಬೇಕು, ನಿಮ್ಮ ಲಾಗ್ ಬುಕ್, ಪ್ರಕಾರ, ಇರಬೇಕು, ಕಚೇರಿ ಯಲ್ಲಿ ಕೂತು, ಬುಕ್ ಬರಿದರೆ, ನಿಮಗೆ ನಾವು ಬುಕ್ ಬರಿಯಬೇಕು ಆಗುತ್ತೆ ಎಂದು ಬಿಸಿ ಮುಟ್ಟಿಸಿದರು.
ನಿಮ್ಮ ಕೆಲಸ ಏನು, ಸರ್ಕಾರದ ಕೆಲಸ ದೇವರ ಕೆಲಸ, ಸಣ್ಣ ದೂರು ಬಂದರು, ನೊಂಡಿ ಕೊಂಡು ಇರಲು ಆಗೋದು ಇಲ್ಲ ಎಂದರು. ಜನರಿಗೆ ಸೇವೆ ಮಾಡಿ ಎಂದರು. ಅಧಿಕಾರಿಗಳು ಗೆ,ನಡುಕು, ಮೈಂಡ್ ಬ್ಲಾಕ್ ಆಗಿತ್ತು.
ಜಿಲ್ಲೆಯ ಅಭಿವೃದ್ಧಿಗೆ ಒಗ್ಗೂಡಿ ಕೆಲಸ ಮಾಡೋಣ*
ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯದ ಅನುದಾನ ಸೇರಿದಂತೆ ವಿವಿಧ ಬಗೆಯ ಅನುದಾನ ಲಭ್ಯವಿದ್ದು, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಒಡಗೂಡಿ ಜಿಲ್ಲೆಯನ್ನು ದೇಶದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿಸಲು ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಬಳ್ಳಾರಿ ಲೋಕಸಭಾ ಸಂಸದ ಈ.ತುಕಾರಾಮ್ ಅವರು ಹೇಳಿದರು.
ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ “ದಿಶಾ” ಸಮಿತಿಯ ದ್ವಿತೀಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಧಿಕಾರಿಗಳು ಸಂವಿಧಾನ ಆಶಯಗಳ ಜೊತೆಗೆ ಮಾನವೀಯ ದೃಷ್ಟಿಯಿಂದ ಸಹ ಕೆಲಸ ಮಾಡಬೇಕು. ಅಂದಾಗ ಜನರಿಗೆ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
*ಕಳ್ಳರ ಏಜೆನ್ಸಿಗಳಿಗೆ ಕಡಿವಾಣ ಹಾಕಿ:*
ಕೆಲವೇ ತಿಂಗಳುಗಳಲ್ಲಿ ಭತ್ತದ ಫಸಲು ರೈತರ ಕೈಸೇರಲಿದೆ. ಖರೀದಿಸುವ ಏಜೆನ್ಸಿಗಳು ಅನಧಿಕೃತವಾಗಿದ್ದು, ರೈತರಿಂದ ಭತ್ತ ಖರೀದಿಸಿ, ಅಲ್ಪ ಮೊತ್ತ ಪಾವತಿಸಿ, ನಂತರ ಪಾವತಿಸಲಾಗುವುದು ಎಂದು ರೈತರನ್ನು ನಂಬಿಸಿ, ಮೊಬೈಲ್ ಆಫ್ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪ್ರಕರಣ ಗಂಗಾವತಿ ದರೋಜಿ ಭಾಗಗಳಲ್ಲಿ ಕಂಡುಬರುತ್ತಿದ್ದು, ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರು.
ಸಂಡೂರು ಶಾಸಕಿ ಈ.ಅನ್ನಪೂರ್ಣ ಅವರು ಮಾತನಾಡಿ, ಸಂಡೂರು ಭಾಗದಲ್ಲಿ ಒಬ್ಬ ರೈತ ಒಂದು ಬೆಳೆ ಬೆಳೆದರೆ, ಉಳಿದ ರೈತರೆಲ್ಲರೂ ಅದೇ ಬೆಳೆ ಬೆಳೆಯಲು ಮುಂದಾಗುತ್ತಿದಾರೆ. ಇದರಿಂದ ಅಸಮತೋಲನವಾಗುತ್ತಿದ್ದು, ಬಹುವಾರು ಬೆಳೆ ಬೆಳೆಯಲು ರೈತರಿಗೆ ಅರಿವು ಮೂಡಿಸಬೇಕು. ಅದೇರೀತಿಯಾಗಿ ಯೂರಿಯಾ ಗೊಬ್ಬರ ಬಳಕೆಯಿಂದಾಗುವ ಪರಿಣಾಮ ಕುರಿತು ರೈತರಲ್ಲಿ ಮನವರಿಕೆ ಮಾಡಿಕೊಡಬೇಕು ಎಂದರು. ಇದಕ್ಕೆ ದನಿಗೂಡಿಸಿದ ಸಂಸದರು, ರೈತರಿಗೆ ಸಂಯುಕ್ತ ಗೊಬ್ಬರ ಬಳಕೆಯ ಕುರಿತು ಅರಿವು ಮೂಡಿಸಬೇಕು. ಹಿಂದಿನ ಪದ್ಧತಿಯ ಸಗಣಿ, ಎಲೆ ಗೊಬ್ಬರ ಬಳಸುವಂತೆ ಸಲಹೆ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು.
*ಅಖಂಡ ಜಿಲ್ಲೆಗೆ 24 ಅಂಚೆ ಕಚೇರಿ ಮಂಜೂರು:*
ನನ್ನ ಇಲ್ಲಿಯವರೆಗಿನ ಸಂಸದನ ಅಧಿಕಾರಾವಧಿಯಲ್ಲಿ ಕೇಂದ್ರದಿಂದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಒಳಗೊಂಡು ಒಟ್ಟು 24 ಅಂಚೆ ಕಚೇರಿಗಳನ್ನು ಮಂಜೂರು ಮಾಡಿಸಲಾಗಿದೆ. ಇದು ಹೆಮ್ಮೆಯ ಸಂಗತಿಯಾಗಿದ್ದು, ಒಂದೊಂದು ಕಚೇರಿಯು 50 ರಿಂದ 60 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಳ್ಳಲಿವೆ. ಬ್ಯಾಂಕಿಂಗ್ ಸೇವೆಯು ಒದಗಿಸಲಾಗುತ್ತದೆ. ಇದರಿಂದ ಅಂಚೆ ಸೌಲಭ್ಯಕ್ಕೆ ಇನ್ನಷ್ಟು ವೇಗ ನೀಡಿದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
*ಬಿಎಸ್ಎನ್ಎಲ್ ಸೇವೆಗೆ ಚುರುಕು:*
ಜಿಲ್ಲೆಯ ಬಿಎಸ್ಎನ್ಎಲ್ ಕಚೇರಿಗೆ ಕೇಂದ್ರದಿಂದ 12.5 ಲಕ್ಷ ರೂ. ಅನುದಾನ ಒದಗಿಸಲಾಗಿದ್ದು, ಜಿಲ್ಲೆಯಲ್ಲಿ ವಿವಿಧೆಡೆ ನೆಟ್ ವರ್ಕ್ ಅನ್ನು 2ಜಿ, 3ಜಿ ಮತ್ತು 4ಜಿ ಸೇವೆಗಳಿಗೆ ಇನ್ನಷ್ಟು ಚುರುಕು ನೀಡಲು, ಬೇಕಾದ ವಿದ್ಯುತ್ ಸಂಪರ್ಕ, ಕೇಬಲ್ ಲೈನ್ ಅಳವಡಿಕೆ ಕಾಮಗಾರಿ ಕೈಗೊಳ್ಳಬೇಕು. ಇದರಿಂದ ಹಳ್ಳಿ ಭಾಗದ ವಿದ್ಯಾರ್ಥಿಗಳಿಗೆ, ಸರ್ಕಾರಿ ಕಚೇರಿಗಳು ಸುಗಮವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.
*ಪರಿಷ್ಕೃತ ರೈಲ್ವೆ ಅಲೈನ್ಮೆಂಟ್ ವರದಿ ಸಲ್ಲಿಸಿ:*
ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಗರದ ರೇಡಿಯೋ ಪಾರ್ಕ್ ನ 2 ನೇ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪುನಾರಂಭಕ್ಕೆ ರೈಲ್ವೆ ರಾಜ್ಯ ಖಾತಾ ಸಚಿವರಾದ ವಿ.ಸೋಮಣ್ಣ ಅವರು ದೀಪಾವಳಿ ಹಬ್ಬದ ನಂತರ ಭೂಮಿಪೂಜೆ ನೆರವೇರಿಸುವರು. ಇದಕ್ಕೆ ಅರಣ್ಯ ಇಲಾಖೆಯ ಜಾಗಕ್ಕೆ ಸಂಬಂಧಿಸಿದಂತೆ ಹಣ ಪಾವತಿಸಿದರೆ, ಕಾಮಗಾರಿ ಆರಂಭವಾಗಲಿದೆ. ಈ ಕುರಿತು ರೈಲ್ವೆ ಕೇಂದ್ರ ಕಚೇರಿಯ ಗಮನಕ್ಕೆ ತರಬೇಕು. ಇದಕ್ಕೆ ಬೇಕಾದ ಅಗತ್ಯ ಅನುದಾನ ಕೂಡ ಒದಗಿಸಲಾಗುವುದು. ಹಾಗಾಗಿ ಪರಿಷ್ಕೃತ ರೈಲ್ವೆ ಅಲೈನ್ಮೆಂಟ್ ಯೋಜನಾ ವರದಿ ಸಲ್ಲಿಸಬೇಕು ಎಂದು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಹೆಚ್.ಆರ್.ಗವಿಯಪ್ಪ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆ ವಿಸ್ತರಣೆ ಕುರಿತಂತೆ ಪರಿಶೀಲನೆ ನಡೆಸುವರು ಎಂದು ತಿಳಿಸಿದರು.
*ನವೆಂಬರ್ ಅಂತ್ಯಕ್ಕೆ ರಿಂಗ್ ರೋಡ್ ಪೂರ್ಣಗೊಳಿಸಲು ತಾಕೀತು:*
ನಗರದೊಳಗೆ ಭಾರೀ ಗಾತ್ರದ ವಾಹನಗಳು ಸಂಚಾರಕ್ಕೆ ಕಡಿವಾಣ ಹಾಕಲು ಈಗಾಗಲೇ ಪ್ರಗತಿಯಲ್ಲಿರುವ ರಿಂಗ್ ರೋಡ್ ಕಾಮಗಾರಿಯು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಎನ್ಹೆಚ್ಎಐ ಅಧಿಕಾರಿಗಳಿಗೆ ತಾಕೀತು ಮಾಡಿದರು. ಅದರಂತೆ ಬಳ್ಳಾರಿ-ಹೊಸಪೇಟೆಗೆ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯೂ ಪೂರ್ಣಗೊಳ್ಳುವ ಹಂತದಲ್ಲಿದ್ದು, ಕೇವಲ 4-5 ಕಿ.ಮೀ ಉದ್ದ ಬಾಕಿ ಇದ್ದು, ತ್ವರಿತವಾಗಿ ಪೂರ್ಣಗೊಳಿಸಬೇಕು. ಸಿರುಗುಪ್ಪ ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿಗೆ ಸಹ ವೇಗ ನೀಡಬೇಕು ಎಂದರು. ಇದೇವೇಳೆ ನಗರದ ಹೊರವಲಯದ ಬಿಐಟಿಎಂ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿಯಿಂದ ಸುಧಾಕ್ರಾಸ್ ವರೆಗೆ ಕೈಗೊಳ್ಳಲು ಉದ್ದೇಶಿಸಲಾಗಿರುವ 4 ಲೈನ್ ರಸ್ತೆಗೆ ಸೂಕ್ತ ಸರ್ವೇ ನಡೆಸಿ ನೀಡಬೇಕು ಎಂದು ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಕೇಂದ್ರದಿಂದ ಟೆಂಡರ್ ಅನುಮೋದನೆ ಪಡೆದುಕೊಳ್ಳಲಾಗಿದೆ. ಕಾಮಗಾರಿ ಕೈಗೆತ್ತಿಗೊಳ್ಳುವಂತೆ ಇಎಸ್ಐ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅದೇರೀತಿಯಾಗಿ ಸಂಡೂರಿನಲ್ಲಿ ಸಹ ಇಎಸ್ಐ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕ್ರಮವಹಿಸಬೇಕು ಎಂದರು.
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಗಳಲ್ಲಿ ಸಾರ್ವಜನಿಕರಿಗಿರುವ ವಿವಿಧ ಯೋಜನೆ ಸೌಲಭ್ಯಗಳ ಕುರಿತು ಸಭೆಗೆ ಸೂಕ್ತ ಮಾಹಿತಿ ಒದಗಿಸುವಂತೆ ಸಂಸದರು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಂಡೂರು ಶಾಸಕಿ ಈ.ಅನ್ನಪೂರ್ಣ ಅವರು ಮಾತನಾಡಿ, ಸಂಡೂರು ಭಾಗದಲ್ಲಿ ಹೆಚ್ಚಾಗಿ ವಿವಿಧ ಬಗೆಯ ಕ್ಯಾನ್ಸರ್ ಪ್ರಕರಣ ಕಂಡುಬರುತ್ತಿವೆ. ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಹೆಚ್ಒ, 9-18 ಮತ್ತು 16-18 ಒಳಗೆ 3 ಡೋಸ್ ಗಳ ಹೆಚ್ ಪಿವಿ ವ್ಯಾಕ್ಸಿನ್ ಲಭ್ಯವಿದ್ದು, ಸರಬರಾಜು ಮಾಡಲಾಗುವುದು ಎಂದರು. ಮಧ್ಯಪ್ರವೇಶಿಸಿದ ಸಂಸದರು, ಪ್ರಸ್ತುತದ ಜೀವನದ ಶೈಲಿಯಲ್ಲಿ ರೋಗ ಕಂಡುಬರುತ್ತಿದ್ದು, ಸೂಕ್ತ ಅನುದಾನದಲ್ಲಿ ಎರಡು ಮೊಬೈಲ್ ವ್ಯಾನ್ ಗಳ ಮೂಲಕ ಐದು ತಾಲ್ಲೂಕುಗಳಲ್ಲಿ ಕ್ಯಾನ್ಸರ್ ರೋಗ ಕುರಿತು ಅರಿವು ಮೂಡಿಸಬೇಕು. ಇಂತಹ ಪ್ರಕರಣಗಳಿಗೆ ಪ್ರಧಾನಮಂತ್ರಿಗಳ ಪರಿಹಾರ ನಿಧಿಯಿಂದ ರೂ.46.75 ಲಕ್ಷ ಅನುದಾನ ಜಿಲ್ಲೆಗೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಾಗ ಸ್ಥಳೀಯ ಶಾಸಕರ-ಜನ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಆಯೋಜಿಸಿ ನೀಡಬೇಕು ಎಂದರಲ್ಲದೇ, ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲ್ಲೂಕುವಾರು ಕ್ಷೇತ್ರ ಭೇಟಿ ನಡೆಸುವಾಗ ಸ್ಥಳೀಯ ಶಾಸಕರ ಗಮನಕ್ಕೆ ಮಾಹಿತಿ ತರಬೇಕು. ಆಯಾ ತಾಪಂ ಅಧಿಕಾರಿಗಳು ಹಾಜರಾತಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಹತ್ತಿರದ ಶಾಲೆಯ ಖಾಲಿ ಇರುವ ಕೊಠಡಿಗಳಿಗೆ ಸ್ಥಳಾಂತರಿಸಬೇಕು, ನಿರ್ವಹಣೆಯು ಸುಲಭವಾಗಲಿದೆ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜೆಜೆಎಂ ಕಾಮಗಾರಿ, ಲೋಕೋಪಯೋಗಿ ಇಲಾಖೆ, ವಿಶೇಷಚೇತನರಿಗೆ ನೀಡುವ ಸಾಮಗ್ರಿ-ಸಲಕರಣೆ, ಪ್ರಧಾನಮಂತ್ರಿ ಆವಾಸ್ ಯೋಜನೆ, ಸರ್ವಶಿಕ್ಷಣ ಅಭಿಯಾನ ಕುರಿತಂತೆ ವಿವಿಧ ಕೇಂದ್ರ ಸರ್ಕಾರದ ಯೋಜನೆಗಳು ಕುರಿತು ಸಮಗ್ರವಾಗಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಬಳ್ಳಾರಿ ವಲಯ ಉಪಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
[video width="848" height="478" mp4="https://news9today.in/wp-content/uploads/2025/10/VID-20251014-WA0004.mp4"][/video]
[video width="848" height="478" mp4="https://news9today.in/wp-content/uploads/2025/10/VID-20251014-WA0003.mp4"][/video]
[video width="848" height="478" mp4="https://news9today.in/wp-content/uploads/2025/10/VID-20251014-WA0002.mp4"][/video]