ರಾತ್ರಿ ಕಾವಲು ಗಾರನಿಂದ ಹಾಸ್ಟೆಲ್ ವಿದ್ಯಾರ್ಥಿಗೆ ತಳಿತ.
ಬಳ್ಳಾರಿ.(16)ಎಸ್ಸಿ ಎಸ್ಟಿ ಹಾಸ್ಟೆಲ್ ಹೊರಗುತ್ತಿಗೆ ನೌಕರ ಮನೋಹರ್ ಪಾಟೇಲ್ 9 ನೇ ತರಗತಿಯ ವಿದ್ಯಾರ್ಥಿ ಯನ್ನು ಮನಬಂದಂತೆ ತಳಿಸಿದ್ದು ಇದೀಗ ಬಳ್ಳಾರಿ ಗಾಂದಿನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ.
ಈ ಘಟನೆ ಶುಕ್ರವಾರ ತಡರಾತ್ರಿ ನಡೆದಿದ್ದು ವಿದ್ಯಾರ್ಥಿಯ ಸಂಬಂಧಿಕರು ಮನೋಹರ ಪಾಟೇಲ್ ಎಂಬ ಕಾವಲು ಗಾರನ ವಿರುದ್ಧ ಪ್ರಕರಣ ದಾಖಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾದ ಸತೀಶ್ ಮತ್ತು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮನೋಹರ ಪಾಟೇಲ್ ಎಂಬ ವ್ಯಕ್ತಿ ಬಳ್ಳಾರಿಯ ಖ್ಯಾತ ಪತ್ರಕರ್ತರು, ಸಂಬಂದಿಕರು ಎಂಬುದು ಬಲ್ಲ ಮೂಲಗಳಿಂದ ತಿಳಿದು ಬಂದಿರುತ್ತದೆ.
ಮನೋಹರ ಪಾಟೇಲ್ ಇಬ್ರಾಹಿಂಪುರ ಗ್ರಾಮದವರಾಗಿದ್ದು ಇವರು ರಾತ್ರಿ ಕಾವಲು ಗಾರ, ಆದರೆ ಹೊರಗಡೆ ನಾನು ಅಸಿಸ್ಟೆಂಟ್ ವಾರ್ಡನ್ ಎಂದು ಎಲ್ಲರಿಗೂ ಹೇಳಿಕೊಂಡಿದ್ದು ಘಟನೆ ಬೆಳಕಿಗೆ ಬಂದಿತು.
ಇದಕ್ಕೆಲ್ಲ ಜನರಲ್ ಹಾಸ್ಟೆಲ್ ವಾರ್ಡನ್ ಎಂ.ಜಿ.ಆಚಾರಿ ಮೂಲ ಕಾರಣ ಹಾಗೂ ಅವರ ಕುಮ್ಮಕ್ಕು ಮತ್ತು ಪತ್ರಕರ್ತರ ಪ್ರಭಾವ ಬಳಕೆ ಆಗಿದೆ ಎಂಬುದು ಅನುಮಾನಕ್ಕೆ ಎಡೆಮಾಡಿಕೊಟ್ಡಿದೆ.
ಈ ಘಟನೆ ಅಧಿಕಾರಿಗಳು ಇವರ ವಿರುದ್ಧ ಯಾವರೀತಿ ಕ್ರಮ ಜರುಗಿಸುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.ಇತ ಒಬ್ಬ ಖ್ಯಾತ ಪತ್ರಕರ್ತ ನಿಷ್ಠಾವಂತ ಅನ್ನುವ ರೀತಿಯಲ್ಲಿ ಬಿಂಬಿನೆ ಮಾಡಿಕೊಂಡು,ಸರ್ಕಾರದ ಯೋಜನೆ ಗಳು ಕೂಡ ದುರ್ಬಳಕೆ ಮಾಡಿಕೊಂಡ ಆರೋಪ ಗಳು ಗ್ರಾಮಸ್ಥರ ಬಾಯಿಯಲ್ಲಿ ಕೇಳಿ ಬರುತ್ತದೆ. ಇದರಲ್ಲಿ ವಿದ್ಯಾರ್ಥಿಗೆ ಅನ್ಯಾಯ ಆದರೆ ಸಂಘಟನೆ ಗಳು ಹೋರಾಟ ಮಾಡುವ ಸಾಧ್ಯತೆ ಗಳು ಇದ್ದಾವೆ. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)