ಹೋಳಿ ಹಬ್ಬ ಪ್ರಯುಕ್ತ ಮಧ್ಯದ ಅಂಗಡಿಗಳ ಮಾರಾಟ ಸ್ಥಗಿತ ಪೊಲೀಸ್ ವರದಿ ಮೇಲೆ ಜಿಲ್ಲಾಧಿಕಾರಿಗಳ ಆದೇಶ.ಬಹುದೊಡ್ಡ ಜಿಲ್ಲೆಗಳಲ್ಲಿ ಮಧ್ಯದ ಮಾರಾಟ ಸ್ನೇಹಿತಗೊಂಡಿಲ್ಲ,
ಬಳ್ಳಾರಿ ವಿಜಯನಗರ ಕೆಲ ಜಿಲ್ಲೆ ಗಳು ಗೆ ಸೀಮಿತ,ಕೋಟಿ ಕೋಟಿ ಲಾಸ್.!!.
ಬಳ್ಳಾರಿ (14)ಹೋಳಿ ಹಬ್ಬದ ಪ್ರಯುಕ್ತ ಕರ್ನಾಟಕದಲ್ಲಿ ಕೆಲ ಜಿಲ್ಲೆಗಳಲ್ಲಿ ಮಾತ್ರವೇ ಮಧ್ಯ ಮಾರಾಟ ಸ್ಥಗಿತಗೊಂಡಿದ್ದು, ಆಶ್ಚರ್ಯ ಘಟನೆ ಹೋಳಿ ಸಂದರ್ಭದಲ್ಲಿ ಯಾವುದೇ ಅವಾಂಚನೀಯ ಘಟನೆಗಳು ನಡೆಯದಂತೆ ಆಯಾ ಜಿಲ್ಲೆಯ ಪೊಲೀಸ್ ವರದ ಮೇಲೆ ಜಿಲ್ಲಾಧಿಕಾರಿಗಳು ಮದ್ಯ ಮಾರಾಟವನ್ನು ಬಂದು ಮಾಡುವಂತೆ ಆದೇಶ ಮಾಡುತ್ತಾರೆ,
ಆದರೆ ಪ್ರತಿನಿತ್ಯ ಕೋಟಿಗಟ್ಟಲೆ ವಹಿವಾಟು ಆಗುವ ಸರ್ಕಾರಕ್ಕೆ ಲಾಭವನ್ನು ನೀಡುವ ಇಲಾಖೆ ಯಾವುದೆಂದರೆ ಅಬಕಾರಿ ಇಲಾಖೆ.
ಬಳ್ಳಾರಿಯಲ್ಲಿ ಒಂದು ವರ್ಷಕ್ಕೆ ಮಧ್ಯದ ಎತ್ತುವಳಿ 700ಕೋಟಿ ಇರುತ್ತೆ, ಅದರ ಪ್ರಕಾರ ಒಂದು ದಿನ ಜಿಲ್ಲೆಯಲ್ಲಿ ಮಧ್ಯದ ಅಂಗಡಿಗಳು ಮಾರಾಟವನ್ನು ಬಂದ್ ಮಾಡಿದರೆ ದಿನಕ್ಕೆ ಎರಡು ಕೋಟಿ ಮೇಲ್ಪಟ್ಟು ವಹಿವಾಟು ಸ್ಥಗಿತಗೊಳ್ಳುತ್ತದೆ.
ಹೋಳಿ ಹಬ್ಬ ಕೇವಲ ಬಳ್ಳಾರಿ ವಿಜಯನಗರ ಮತ್ತು ಕೆಲ ಸೀಮಿತ ಜಿಲ್ಲೆಗಳಲ್ಲಿ ಮಾತ್ರವೇ ಮಧ್ಯದ ಮಾರಾಟವನ್ನು ಬಂದ್ ಮಾಡಲಾಗುತ್ತದೆ, ಎಂದು ಅಬಕಾರಿ ಡಿಸಿ ಮಂಜುನಾಥ್ ಅವರು ದೂರವಾಣಿ ಮೂಲಕ ತಿಳಿಸಿದ್ದಾರೆ.
ಗಡಿ ಜಿಲ್ಲೆಯಾದ ಚಿತ್ರದುರ್ಗ ಮುಂತಾದ ಪ್ರದೇಶಗಳಲ್ಲಿ ಯಾವುದೇ ಮಧ್ಯದ ಮಾರಾಟ ಬಂದ್ ಇಲ್ಲ.
ರಾಜಾರೋಷವಾಗಿ ಮಧ್ಯದ ಅಂಗಡಿಗಳು ಮಾರಾಟವನ್ನು ಮಾಡುತ್ತಾನೆ ಇದ್ದಾವೆ.
ಹೋಳಿ ಸಂದರ್ಭದಲ್ಲಿ ಏನಾದರೂ ಆವಾಂಚನೆಯ ಘಟನೆಗಳು ಆಗದಂತೆ ಮಧ್ಯದ ವೈವಾಟಿಗಳನ್ನು ನಿಲ್ಲಿಸಲಾಗುತ್ತದೆ ಎಂದು ಅಧಿಕಾರಗಳು ತಿಳಿಸಿದ್ದಾರೆ.
ಆದರೆ ಪೊಲೀಸರು ಕೂಡ ಅದೇ ವರದಿಯನ್ನು ನೀಡುತ್ತಿರುವುದು ಇಲ್ಲಿ ಒಂದು ರೀತಿಯಲ್ಲಿ ಕರ್ತವ್ಯ ವಿಫಲತೆ ಕಂಡು ಬರುತ್ತದೆ.
ಹೋಳಿ ಹಬ್ಬ ಆಚರಣೆ ಸಂದರ್ಭದಲ್ಲಿ ಬಿಗಿ ಬಂದೋಬಸ್ತು ಮಾಡಿ ಹಬ್ಬವನ್ನು ಆಚರಣೆ ಮಾಡಬಹುದು.
ಆದರೆ ಮಧ್ಯದ ಮಾರಾಟವನ್ನು ಬಂದ್ ಮಾಡಿ ಹೋಳಿ ಹಬ್ಬವನ್ನು ಆಚರಣೆ ಮಾಡುವಂತೆ ಜಿಲ್ಲಾಧಿಕಾರಿಗಳ ಆದೇಶ ಮಾಡುತ್ತಿರುವುದು ಎಷ್ಟು ಸರಿ ಎನ್ನುವುದು ಪ್ರಶ್ನೆಯಾಗಿದೆ.
ಹೋಳಿ ಹಬ್ಬದ ಪ್ರಯುಕ್ತ ಮಧ್ಯದ ಮಾರಾಟವನ್ನು ಸ್ಥಳಿತಗೊಳಿಸಿ ಅಂಗಡಿಗಳು ಗೆ ಸೀಲ್ ಹಾಕಿ ವೈವಾಟು ಬಂದ್ ಮಾಡಿ,ಅಬಕಾರಿ ಇಲಾಖೆ ಕೈ ತೊಳೆದುಕೊಂಡು ಆರಾಮಾಗಿರುತ್ತದೆ,
ಆದರೆ ಜಿಲ್ಲೆಯಲ್ಲಿ ಮಾತ್ರ ಬೀದಿ ಬೀದಿಯಲ್ಲಿ ಮಧ್ಯೆ ಈಜಿಯಾಗಿ ಸಿಗುತ್ತದೆ, ಆದರೆ, ಮಧ್ಯದ ವೈವಾಟುವನ್ನು ಸಹಿತಗೊಳಿಸಿ ಅಕ್ರಮ ಮಾರ್ಗದಲ್ಲಿ ಮಾರಾಟ ಮಾಡುವವರಿಗೆ ಅನುಕೂಲ ಮಾಡಿದಂತಾಗಿದೆ.
ಅಬಕಾರಿ ಅಧಿಕಾರಗಳು ಮಾತ್ರ ಬೀದಿಬದಿಯಲ್ಲಿ ಮಾರಾಟ ಮಾಡುವವರನ್ನು ನಿಯಂತ್ರಣ ಮಾಡುವುದರಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ.
ಇದಲ್ಲದೆ ಒಂದು ಬಾಟಲಿ ಮಾಲೆ ಐವತ್ತು ರೂಪಾಯಿ ದುಬಾರಿ ದರವನ್ನು ಹೇರಿಸಿ ಮಾರಾಟ ಮಾಡುವುದು ಮದ್ಯಪಾನ ಪ್ರಿಯರಿಗೆ ಕಷ್ಟವನ್ನು ತಂದು ಕೊಟ್ಟಿದೆ. ಆದೇಶ ಗಳು ಮಾಡುವ ಮುನ್ನ ಕಷ್ಟ್ ಸುಖ ಗಳು ನೋಡಿ ಮಾಡಬೇಕು ಆಗಿದೆ.