•ಸಂಘದ ವಿರೋಧಿ ಗಳು.
•ಸ್ವಂತ ಲಾಭಕ್ಕಾಗಿ.
•ಅಧಿಕಾರಿಗಳನ್ನು ಬೆದೆರಿಕೆ ಹಾಕವದೇ ಇವರ ಕೆಲಸ.
ಬಳ್ಳಾರಿ (10)ಗಾದಿಲಿಂಗಪ್ಪ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು, ಬಳ್ಳಾರಿ ಇವರ ವಿರುದ್ದ ನೀಡಿದ ದೂರನ್ನು ಖಂಡನೆ ಮಾಡುತ್ತಾ ವಿವಿದ ಸಂಘಟನೆಗಳ ಮುಖಂಡರು ಮನವಿ ಯನ್ನು ಜಿಲ್ಲಾಧಿಕಾರಿ ಗಳು ಗೆ ಬುದುವಾರ ಸಲ್ಲಿಸಿದ್ದಾರೆ.
ಈ ವಿಷಯಕ್ಕೆ ಸಂಬಂದಿಸಿದಂತೆ ಬಳ್ಳಾರಿ ಜಿಲ್ಲಾ ವಾಲ್ಮೀಕಿ ನಾಯಕ ಒಕ್ಕೂಟ, ಶ್ರೀ ಮಹರ್ಷಿ ವಾಲ್ಮೀಕಿ ಯುವ ಘರ್ಜನೆ ಸೇನೆ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕರ ಮಹಾಸಭಾ ಹಾಗೂ ಎಲ್ಲಾ ನಿರ್ದೇಶಕರುಗಳು ಪದಾಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ವಾಲ್ಮೀಕಿ ಸಮಾಜದವರು, ಬುಧವಾರ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ಆಗಿರುವ ಗಾದಿ ಲಿಂಗಪ್ಪ ವಿರುದ್ದ ಮೊನ್ನೆ ಸಲ್ಲಿಸಿದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮುಖಂಡರು,ಕೆಲವರು ಕಟ್ಟಬದ್ರ ಹಿತಾಶಕ್ತಿಗಳು ಮತ್ತು ಸಂಘದ ವಿರೋಧಿಗಳು ತಮ್ಮ ಸ್ವಂತ ಲಾಭಕ್ಕಾಗಿ ತಮ್ಮದೇ ಆದಂತ ಶೈಲಿಯಲ್ಲಿ ಸಮಾಜದ ಮುಖಂಡರಿಗೆ ತಪ್ಪು ಮಾಹಿತಿಯನ್ನು ನೀಡಿ ಸಮಾಜವನ್ನು ಒಡೆಯಲು ದುರುದ್ದೇಶದಿಂದ, ಗಾದಿಲಿಂಗಪ್ಪ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು, ಬಳ್ಳಾರಿ ಯಲ್ಲಿ ಸುಮಾರು ಒಂದು ವರ್ಷಗಳಿಂದ ತಾಲ್ಲೂಕು ಅಧಿಕಾರಿಯಾಗಿ ಸರ್ಕಾರದ ಆದೇಶಗಳನ್ನು ಮತ್ತು ನಿಯಮಗಳನ್ನು ಪಾಲನೆ ಮಾಡಿಕೊಂಡು ಅದೇ ರೀತಿ ಮೇಲಾಧಿಕಾರಿಗಳ ಆದೇಶದಂತೆ ಯಾರಿಗೆ ತೊಂದರೆ ಆಗದಂತೆ ಅವರ ಕೆಲಸ ಕಾರ್ಯಗಳನ್ನು ನಿರ್ವಹಣೆ ಮಾಡಿಕೊಂಡು ಬಂದಿರುತ್ತಾರೆ.
ಇದರ ನಿಷ್ಠೆ ಮತ್ತು ಪ್ರಮಾಣಿಕತೆಯನ್ನು ಸಹಿಸದೆ ಇಲ್ಲ ಸಲ್ಲದ ಆಧಾರ ರಹಿತ ಅಪಾಧನೆಗಳನ್ನು ಮಾಡಿರುವುದು ಎಲ್ಲಾ ಜಿಲ್ಲಾ ಮುಖಂಡರುಗಳು ಖಂಡನೆ ಮಾಡುತ್ತಾ ಒಬ್ಬ ನಿಷ್ಠವಂತ ಸರ್ಕಾರಿ ಅಧಿಕಾರಿಯ ಮೇಲೆ ಈ ರೀತಿ ದೂರುಗಳನ್ನು ನೀಡಿ ಅವರ ಕೆಲಸ ಕಾರ್ಯಗಳಿಗೆ ತೊಂದರೆ ಮಾಡಿ ಮತ್ತು ಮಾನಸಿಕವಾಗಿ ಕುಗ್ಗುವಂತ ರೀತಿಯಲ್ಲಿ ದೂರು ನೀಡಿರುವುದು ಇದು ಸತ್ಯಕ್ಕೆ ದೂರವಾಗಿರುತ್ತದೆ.
ಶ್ರೀ ವಾಲ್ಮೀಕಿ ಭವನದ ಬಗ್ಗೆ ಮೇಲಾಧಿಕಾರಿಗಳು ಆದೇಶದ ಬಗ್ಗೆ ಉಸ್ತುವಾರಿಯನ್ನು ಮಾಡಿಕೊಂಡು ಬಂದಿದ್ದು, ಇಲ್ಲಿತನಕ ಯಾವುದೇ ವೈಯಕ್ತಿಕ ದೂರುಗಳು ಬಂದಿರುವುದಿಲ್ಲ. ಅದೇ ರೀತಿ ಪರಿಶಿಷ್ಟ ಪಂಗಡ ವಿದ್ಯಾರ್ಥಿ ನಿಲಯದಲ್ಲಿಯು ಸಹ ಪ್ರತಿ ದಿನ ಬಿಡುವಿನ ಸಮಯದಲ್ಲಿ ತಪ್ಪದೇ ವಿದ್ಯಾರ್ಥಿ ನಿಲಯಕ್ಕೆ ಬೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ ಬೋಧನೆ ನೀಡಿ ಮುಂದಿನ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಒಳ್ಳೆ ರೀತಿಯಲ್ಲಿ ನಡೆಸಿಕೊಂಡು ಹೋಗಲು ಮತ್ತು ಎಲ್ಲಾ ವಿದ್ಯಾರ್ಥಿಗಳು ಶಿಸ್ತು ಮತ್ತು ಪ್ರಮಾಣೀಕತೆಯನ್ನು ಕಾಪಾಡಿಕೊಂಡು ಹೋಗಲು ಬೋಧನೆ ನೀಡಿರುತ್ತಾರೆ.
ಇಲ್ಲಿತನಕ ವಿದ್ಯಾರ್ಥಿಗಳ ಪೋಷಕರಿಂದಾಗಲೀ ಮತ್ತು ವಿದ್ಯಾರ್ಥಿಗಳಿಂದಾಗಲಿ ಯಾವುದೇ ವಿದ್ಯಾರ್ಥಿ ನಿಲಯದ ಮೂಲಭೂತ ಸೌಕರ್ಯಗಳ ಬಗ್ಗೆ ದೂರುಗಳು ನೀಡಿರುವುದಿಲ್ಲ.
>:-ಆದರೆ ಕೆಲವರು ಜಿಲ್ಲೆಯ ಮುಖಂಡರು ಪ್ರತಿ ದಿನ ಎಲ್ಲಾ ಕಛೇರಿಗಳಲ್ಲಿ ಬೇಟಿ ನೀಡಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ನಿಮ್ಮ ಮೇಲೆ ದೂರುಗಳನ್ನು ನೀಡುತ್ತೇವೆಂದು ಬೆದರಿಕೆ ಹಾಕವುದೇ ಇವರ ಉದ್ದೇಶವಾಗಿರುತ್ತದೆ.
ಈ ರೀತಿ ವರ್ತನೆ ಸುಳ್ಳು ದೂರುಗಳು ನೀಡುವ ಮುಖಂಡರುಗಳ ಯಾವುದೇ ದೂರುಗಳನ್ನು ಯಾವುದೇ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದಾಗ ಅದನ್ನು ಪರಿಗಣಿಸಬಾರದೆಂದು ಅಧಿಕಾರಿಗಳ ಮೇಲೆ ಪಿತ್ತೂರಿ ಮಾಡುವುದೇ ಇವರ ಉದ್ದೇಶವಾಗಿರುತ್ತದೆ.
ಶ್ರೀ ವಾಲ್ಮೀಕಿ ಭವನದ ಬಗ್ಗೆ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ನಮ್ಮ ಸಹಮತವಿರುತ್ತದೆ ಎಂದು ಈ ಹಿಂದೆ ನೀಡಿರುವಂತ ಸುಳ್ಳು ದೂರುಗಳಿಗೆ ಮಾನ್ಯತೆ ನೀಡದೆ ಅದನ್ನು ಮುಕ್ತಾಯಗೊಳಿಸಿ ನಿಷ್ಠವಂತ ಅಧಿಕಾರಿಗಳಿಗೆ ಸಾರ್ವಜನಿಕರ ಕೆಲಸಗಳನ್ನು ಸುಗಮವಾಗಿ ನಿರ್ವಹಿಸಿಕೊಂಡು ಹೋಗಲು ಅನೂಕೂಲ ಮಾಡಿಕೊಡಬೇಕೆಂದು ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ,
ಜೋಳದರಾಶಿ ತಿಮ್ಮಪ್ಪ ರಾಜ್ಯಾಧ್ಯಕ್ಷರು
ಎನ್.ಮುದಿಮಲ್ಲಯ್ಯ ಜಿಲ್ಲಾಧ್ಯಕ್ಷರು.ಸುರೇಶ್ ಪ್ರಧಾನ ಕಾರ್ಯದರ್ಶಿ. ನಿವೃತ್ತಿ ಪಿ. ಪಿ. ಜಯರಾಮ್. ಇನ್ನು ನೂರಾರು ಸಂಖ್ಯೆ ಯಲ್ಲಿ ಮುಖಂಡರು ಭಾಗವಹಿಸಿ ದ್ದರು.
ಸೋಮವಾರ 8/9/25 ರಂದು ಅಖಿಲಾ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಅವರು ಗಾದಿ ಲಿಂಗಪ್ಪ ವಿರುದ್ಧ ನೀಡಿದ ದೂರು.
[video width="1280" height="720" mp4="https://news9today.in/wp-content/uploads/2025/09/VN20250910_142808.mp4"][/video]




