Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜನಾರ್ಧನ್ ರೆಡ್ಡಿ ವಿರುದ್ದ ಲಾಡ್ ಸಿಡಿಲು. ಅಮಿತ್ ಶಾಗೆ ದೂರು!!- ಅನಿಲ್ ಲಾಡ್ ಪ್ರಯಾಣ ಅನುಮಾನ,ಬಿಜೆಪಿ ವಲಯದಲ್ಲಿ ಕಕ್ಕಬಿಕ್ಕಿ.

ಜನಾರ್ಧನ್ ರೆಡ್ಡಿ ವಿರುದ್ದ ಲಾಡ್ ಸಿಡಿಲು. ಅಮಿತ್ ಶಾಗೆ ದೂರು!!- ಅನಿಲ್ ಲಾಡ್ ಪ್ರಯಾಣ ಅನುಮಾನ,ಬಿಜೆಪಿ ವಲಯದಲ್ಲಿ ಕಕ್ಕಬಿಕ್ಕಿ.

ಬಳ್ಳಾರಿ : ಬಳ್ಳಾರಿ ನಗರದ ವಿವಿಧ ಭಾಗಗಳಲ್ಲಿ ಜನಸಾಮಾನ್ಯರನ್ನು ಬೆದರಿಸಿ ಮನೆಗಳು, ಜಾಗಗಳು ಆಕ್ರಮವಾಗಿ ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ಅವರು ಕಬ್ಜ ಮಾಡಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಅನಿಲ್ ಎಚ್ ಲಾಡ್ ಅವರು ಆರೋಪಿಸಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ನನ್ನ ಮನೆ ಸೇರಿ ಅವಂಭಾವಿ, ವೀರನಗೌಡ ಕಾಲೋನಿ ಸಾಕಷ್ಟು ಮನೆಗಳನ್ನು ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ಅವರು ಆಕ್ರಮವಾಗಿ ನೊಂದಣಿ ಮಾಡಿಕೊಂಡಿದ್ದಾರೆ. 2008ರಲ್ಲಿ ನಾನೊಂದು ಮನೆ ಖರೀದಿ ಮಾಡಿದ್ದೆ, ಜನಾರ್ಧನ್ ರೆಡ್ಡಿ ಅವರ ಮಾವನ ಹೆಸರಿಗೆ ಅಕ್ರಮವಾಗಿ ನೊಂದಣಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಬಳ್ಳಾರಿಯ ಟಿ.ಬಿ ಸ್ಯಾನಿಟೋರಿಯಂ ಬಳಿ ಸುಮಾರು 150 ಎಕರೆ ಜಮೀನು ಆಕ್ರಮವಾಗಿ ಸಂಪಾದನೆ ಮಾಡಿಕೊಂಡಿದ್ದಾರೆ. ನಗರದ ಅವಂಭಾವಿಯ ನಧಾಫ್ 100 ಎಕರೆ ಜಮೀನಿ ಹಾಕಿಕೊಂಡಿದ್ದಾರೆ ಎಂದು ದೂರಿರುವ ಅವರು, ಜನಸಾಮಾನ್ಯರಿಗೆ ತೊಂದರೆ ಕೊಟ್ಟಿರುವ ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ವಿರುದ್ಧ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ದೂರು ಕೊಡುವೆ ಎಂದರು.

ಮೂವರು ಪ್ರಮುಖ ವ್ಯಕ್ತಿಗಳಿಂದ ರಹಸ್ಯವಾಗಿ ಸಭೆ ಮಾಡಿ ಆಕ್ರಮ ಮಾಡಿ ಜಾಗವನ್ನು ಹೊಡೆದುಕೊಂಡಿದ್ದಾರೆ. ಬಳ್ಳಾರಿ ನಗರದಲ್ಲಿ ಯಾರೇ ಜನಾರ್ಧನ್ ರೆಡ್ಡಿಯಿಂದ ಜಾಗವನ್ನು ಕಳೆದುಕೊಂಡರು ನನಗೆ ದಾಖಲೆಗಳು ಕೊಟ್ಟರೆ ನಾನು ಎರಡ್ಮೂರು ದಿನಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದಾಖಲೆ ಸಮೇತ ದೂರು ಕೊಡುವೇ ಎಂದರು. ಇದರಲ್ಲಿ ಯಾರೇ ಜನಾರ್ಧನ್ ರೆಡ್ಡಿಯಿಂದ ಅನ್ಯಾಯವಾಗಿದ್ರೆ ನನಗೆ ಮಾಹಿತಿ ಕೊಡಿ ಎಂದು ವಿನಂತಿ ಮಾಡಿದ್ದಾರೆ.

ರೆಡ್ಡಿಯವರ ವ್ಯವಹಾರ ಜಿಂದಾಲ್ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿ ಒಬ್ಬರ ಸಮ್ಮುಖದಲ್ಲಿ ನಡೆದಿದೆ ಏಂದರು.

ಹಲವಾರು ವರ್ಷಗಳು ರಾಜಕೀಯ ದಲ್ಲಿ ಇದ್ದು ಇಷ್ಟು ತಡವಾಗಿ ಯಾಕೆ ಆರೋಪ ಮಾಡುತ್ತಾ ಇದ್ದಿರಿ ಏಂದು ಕೇಳಿದ ಪ್ರಶ್ನೆಗೆ ತಬ್ಬಿಬಿಬ್ಬಿ ಯಾಗಿ ಸಮಯ ಬರಲಿಲ್ಲ ಏಂದರು.

ಗುಡಿಬಿಡಿ ಯಲ್ಲಿ ಯಾವುದೇ ದಾಖಲೆ ಇಲ್ಲದೆ ಪತ್ರಿಕಾ ಗೋಷ್ಟಿ ಮಾಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈಗಾಗಲೇ ವಿಧಾನ ಸಭೆ ಚುನಾವಣೆಯಲ್ಲಿ ಟಿಕೆಟ್ ಇಲ್ಲವೆಂದು ಖಾತ್ರೆ ಮಾಡಿಕೊಂಡ ಅನಿಲ್ ಲಾಡ್,ಜನಾರ್ದನ ರೆಡ್ಡಿ ವಿರುದ್ಧ ಆರೋಪ ಗಳು ಮಾಡುತ್ತಾರೆ ಎಂದರೆ *ಬಿಜೆಪಿ ಕಡೆಗೆ ಮುಖವನ್ನು ತೋರಿಸುತ್ತದೆ,ಅನ್ನುವ ಅನುಮಾನಗಳು ಕಾಣುತ್ತವೆ*.

ಈಗಾಗಲೇ ಬಳ್ಳಾರಿಯಲ್ಲಿ ಬಿಜೆಪಿ ಟಿಕೆಟ್ ಗೊಂದಲ ಆರಂಭ ವಾಗಿದೆ.

ಒಂದು ಕಡೆಗೆ ಕೊನಂಕಿ, ರಾಮಲಿಂಗಪ್ಪ, ಈಬಾರಿ ಸೋಮಶೇಖರ್ ರೆಡ್ಡಿ ಗೆ ಟಿಕೆಟ್ ಸಿಗದಂತೆ ಟಕ್ಕರ್ ಕೊಡುತ್ತ ಇದ್ದಾರೆ.

ಚುನಾವಣೆ ಗೆ ಮೊದಲೇ ಸೋಮಶೇಖರ್ ರೆಡ್ಡಿ ಸೋಲು ಖಚಿತ ಏಂದು ರಾಮಲಿಂಗಪ್ಪ ಬಹಿರಂಗ ವಾಗಿ ಹೇಳಲಾಗಿತ್ತು.

ಇದರ ಮದ್ಯದಲ್ಲಿ ಅನಿಲ್ ಲಾಡ್ ಬಡಾಯಿ ಲಡಾಯಿ,ಸೋಮಶೇಖರ್ ರೆಡ್ಡಿ ಗೆ,ಉಸಿರು ಗಟ್ಟಿದ ವಾತಾವರಣ ಸೃಷ್ಟಿ ಅಗಿದೆ.

ಲಾಡ್ ಗೋಷ್ಟಿ ಗಡಿ ಬಿಡಿ ಇದ್ದರು ಇದರ ಹಿಂದೆ ಮಹತ್ತರ ರಹಸ್ಯ ಇದೆ ಅನಿಸುತ್ತದೆ.

ದಿನ ದಿನಕ್ಕೆ ಪ್ರಸ್ತುತ ಶಾಸಕ ನಡೆ ಬಿಜೆಪಿ ವಲಯದಲ್ಲಿ ಅನುಮಾನ ದಿಂದ ನೋಡುವ ವಾತಾವರಣ ಸೃಷ್ಟಿ ಅಗಿದೆ ಏಂದು ಪಕ್ಷದಲ್ಲಿ ಅವರ ಆಪ್ತರ ಗುಸು ಗುಸು ಗಳು ಕೇಳಿ ಬಂದಿದೆ ಎಂದು ಗುಸು ಗುಸು ಇದೆ!!.ಪ್ರಸ್ತುತ ವಾತಾವರಣ ದಲ್ಲಿ ಶ್ರೀ ರಾಮುಲು ಅವರು ಕೂಡ ಬಿಜೆಪಿ ಯಲ್ಲಿ ಗೆಲ್ಲುವ ಕುದುರೆ ಬೇಕು ಅದರೆ ಮೇಲೆ ಸವಾರಿ ಮಾಡಬೇಕು ಅನ್ನುವ ಆಲೋಚನೆ ದಲ್ಲಿ ಇದ್ದಾರೆ ,ಹೈ ಕಮಾಂಡ್ ಆದೇಶ ದಂತೆ ಹೋಗುವ ಆಲೋಚನೆ ಹೊಂದಿದ್ದಾರೆ ಏಂದು ತಿಳಿದು ಬಂದಿದೆ.

ಕೆ.ಬಜಾರಪ್ಪ ವರದಿಗಾರರು.ಕಲ್ಯಾಣ ಕರ್ನಾಟಕ.

[video width="960" height="540" mp4="https://news9today.in/wp-content/uploads/2023/03/VN20230313_154315.mp4"][/video]

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.