Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸೋಣ: ಶಾಸಕ ನಾರಾ ಭರತ್ ರೆಡ್ಡಿ

ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸೋಣ: ಶಾಸಕ ನಾರಾ ಭರತ್ ರೆಡ್ಡಿ



ಬಳ್ಳಾರಿ, ಏ.22: ಈ ಸಲ ಕೇವಲ ಶಿಷ್ಟಾಚಾರಕ್ಕೆ ಕಟ್ಟು ಬೀಳದೆ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ನಗರದ ಖಾಸಗಿ ಹೊಟೇಲಿನಲ್ಲಿ ಸೋಮವಾರ ಸಂಜೆ ಏರ್ಪಡಿಸಲಾಗಿದ್ದ ವೀರಶೈವ ಲಿಂಗಾಯತ ಸಮುದಾಯದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಬಸವ ಜಯಂತಿಯ ಆಚರಣೆಗೆ ಬೇಕಾಗುವ ಎಲ್ಲ ಅನುಕೂಲಗಳನ್ನು ನಾನು ಮಾಡಿ ಕೊಡುವೆ, ಶಿಷ್ಟಾಚಾರದ ಬಗ್ಗೆ ಯಾವುದೇ ಆಲೋಚನೆ ಬೇಡ, ಸಮಾಜದ ಜನರ ಸಹಕಾರದೊಂದಿಗೆ ಅದ್ಧೂರಿ ಜಯಂತಿ ಆಚರಿಸೋಣ ಎಂದರು.

ಈವರೆಗೆ ಹಿಂದೆಂದೂ ಆಗದ ರೀತಿಯಲ್ಲಿ ಐತಿಹಾಸಿಕ ಜಯಂತಿಯ ಆಚರಣೆ ಈ ಸಲ ಆಗಬೇಕು ಎಂದ ಅವರು, ವೀರಶೈವ ಲಿಂಗಾಯತ ಸಮುದಾಯದ ಜನರ ಐಕ್ಯತೆಯ ಪ್ರದರ್ಶನ ಆಗುವ ರೀತಿಯಲ್ಲಿ ಜಯಂತಿ ಆಚರಿಸುವಂತಾಗಬೇಕೆಂದರು.

ಜಯಂಅಂತಿಯಲ್ಲಿ ಎಲ್ಲರೂ ಭಾಗಿಯಾಗಬೇಕು, ಜಯಂತಿ ಆಚರಣೆಯಲ್ಲಿ ನನ್ನ ಸ್ವಾರ್ಥ ಏನೂ ಇಲ್ಲ, ಬಸವಣ್ಣ ಅವರನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಿದೆ ಇದರಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾತ್ರ ಮಹತ್ವದ್ದು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ಸರ್ಕಾರಿ ಕಾರ್ಯಕ್ರಮದ ಜೊತೆಗೆ ಸಮಾಜದ ವತಿಯಿಂದ ಕೂಡ ಅದ್ಧೂರಿಯಾಗಿ ಜಯಂತಿ ನಡೆಯಬೇಕು, ಆ ರೀತಿಯಲ್ಲಿ ಜಯಂತಿಯನ್ನು ಯೋಜಿಸೋಣ ಎಂದರು.

ಒಂದೂವರೆ ಕೋಟಿ ರೂ.ಗಳ ಅನುದಾನದಲ್ಲಿ ಅಶ್ವಾರೂಢ ಬಸವಣ್ಣ ಪುತ್ಥಳಿ ಸ್ಥಾಪನೆ ಮಾಡಲಾಗುವುದು, ಈಗಿನ ಕೆಇಬಿ ವೃತ್ತದ ಬಳಿ ಪುತ್ಥಳಿ ಸ್ಥಾಪನೆ ಆಗಲಿದೆ, ಇದಕ್ಕಾಗಿ ಜಾಗ ನೀಡಿರುವ ಗಡಿಗಿ ಕುಟುಂಬದವರನ್ನು ಅಭಿನಂದಿಸುವೆ ಎಂದರು.

ಈ ಸಂದರ್ಭ ಕಮ್ಮರಚೇಡು ಸಂಸ್ಥಾನ ಕಲ್ಯಾಣಸ್ವಾಮಿ, ಹರಗಿನಡೋಣಿ ಸ್ವಾಮಿಗಳು ಸಭೆಯ ಸಾನ್ನಿಧ್ಯ ವಹಿಸಿದ್ದರು.

ಅಲ್ಲಮ ಪ್ರಶಾಂತ್, ದಂಡಿನ್ ಶಿವಾನಂದ, ಚೋರನೂರು ಕೊಟ್ರಪ್ಪ, ಕೋರಿ ವಿರೂಪಾಕ್ಷಪ್ಪ , ಕೇರನಹಳ್ಳಿ ಚಂದ್ರಶೇಖರ್, ನರೇಂದ್ರಬಾಬು, ವೀರೇಶ್ ಗೌಡ ವಕೀಲ, ಪನ್ನರಾಜ, ಟಿ.ಎಚ್.ಎಂ. ಗುರು ಬಸವರಾಜ್, ಜಾನೆಕುಂಟೆ ಸಣ್ಣ ಬಸವರಾಜ್, ಸಿದ್ದಮ್ಮನಹಳ್ಳಿ ತಿಮ್ಮನಗೌಡ, ಚಾನಾಳ ಶೇಖರ್, ಕೆಎನ್ಎಂ ಅಭಿಲಾಶ್, ತಿಮ್ಮನಗೌಡ, ಸಂಗನಕಲ್ಲು ಬಸವರಾಜ್, ಯಾಳ್ಪಿ ಪಂಪನಗೌಡ, ಡಾ.ಮಹಿಪಾಲ್, ಮಲ್ಲನಗೌಡ, ನಿಷ್ಟಿ ರುದ್ರಪ್ಪ, ಅಸುಂಡಿ ನಾಗರಾಜ್, ಮೀನಳ್ಳಿ ಚಂದ್ರಶೇಖರ್, ಜೆ.ಎಂ.ಬಸವರಾಜ್ ಸ್ವಾಮಿ ಹಾಗೂ ರಾಷ್ಟ್ರೀಯ ಬಸವ ದಳದವರು, ವೀರಶೈವ ಲಿಂಗಾಯತ ಸಮಾಜದ ಹಲವು ಮುಖಂಡರು ಹಾಜರಿದ್ದು ಜಯಂತಿ ಯಶಸ್ವಿಗೊಳಿಸಲು ಸಲಹೆ ನೀಡಿದರು.

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.