ಬಳ್ಳಾರಿ(4)ಸೋಮವಾರ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಹಾನಗರ ಪಾಲಿಕೆಯಲ್ಲಿ ಸಕ್ರಿಯವಾಗಿ ಆಡಳಿತ ವ್ಯವಸ್ಥೆ ನಡೆಯುತ್ತ ಇಲ್ಲವೆಂದು ಆರೋಪ ಮಾಡಿರುವ,ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿ ಸದಸ್ಯರು ಹಿರಿಯ ಮುಖಂಡರು ಪಾಲಿಕೆ ಸದಸ್ಯರು ಆಗಿರುವಂತ ಇಬ್ರಾಹಿಂ ಬಾಬು ಪಾಲಿಕೆಯ ಕಮಿಷನರ್ ಆಗಿರುವಂತ ಖಲೀಲ್ ವಿರುದ್ಧ ಖಾಸಗಿ ಪ್ರಕರಣ ದಾಖಲೆ ಮಾಡಿ ತಾವು ಎಲ್ಲಿದ್ದರೂ ಬಿಡುವುದಿಲ್ಲವೆಂದು ಬಹಿರಂಗವಾಗಿ ಸಂದೇಶ ರವಾನೆ ಮಾಡಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಕಮಿಷನರು ಸಕ್ರಿಯವಾಗಿ ಕೆಲಸ ನಿಭಾಯಿಸುತ್ತಿಲ್ಲವೆಂದು ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ನೀಡುವ ವ್ಯವಸ್ಥೆಗೆ ನಿಂತಿದ್ದು, ಜನರು ಆಕ್ರೋಶಗೊಂಡಿದ್ದು ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಕಮಿಷನರಿಗೆ ನೇರವಾಗಿ ತಮ್ಮ ವಿರುದ್ಧ ಖಾಸಗಿ ಪ್ರಕರಣ ದಾಖಲೆ ಮಾಡಬೇಕಾಗುತ್ತದೆ ಎಂದರು.
ಇದರಿಂದ ಗಾಬರಿಗೊಂಡ ಕಮಿಷನರ್ ಅಲ್ಲಿದ್ದ ಮೇಯರ್ ಸ್ವಲ್ಪ ಹೊತ್ತು ಮೌನಕ್ಕೆ ಶರಣು ಆಗಿದ್ದರು.
ಮಹಾನಗರ ಪಾಲಿಕೆಯಲ್ಲಿ ಜನರಿಗೆ ಕಾಣದಂತೆ ಏನೋ ಗೋಲ್ಮಾಲ್ ನಡಿಯುತ್ತದೆ ಅನ್ನುವುದು ಇಬ್ರಾಹಿಂ ಬಾಬು ಅವರ ಆಕ್ರೋಶದ ನುಡಿಗಳು ಹೇಳುತ್ತವೆ.
ಇದು ಅಲ್ಲದೆ ಮತ್ತೊಬ್ಬ ಕಾಂಗ್ರೆಸ್ ಸದಸ್ಯ ಕುಬೇರ ಅವರು ಕೂಡ ಪದೇ ಪದೇ ಕಮಿಷನರ್ ಮತ್ತು ಮೇಯರ್ ಮಾಡುತ್ತಿರುವ ಕರಮತ್ತುಗಳನ್ನು ಬಹಿರಂಗಪಡಿಸಿದ್ದು ಆಶ್ಚರ್ಯ ಮೂಡಿಸಿದೆ.
ಡಿಸಿ ಅವರೆಗೆ ದೂರು ಕೊಡುತೀನಿ ಎಂದು ಉಳಿದ ಸದಸ್ಯರ ಸಹಕಾರ ನೀಡಬೇಕೆಂದು ಕುಬೇರವರು ಬಹಿರಂಗವಾಗಿ ಹೇಳಿದ್ದು ಸಾರ್ವಜನಿಕ ಸಭೆಯ ವಿಚಾರಗಳನ್ನು ಅವರೇ ನೇರವಾಗಿ ಮೊಬೈಲ್ ನಲ್ಲಿ ಸರಿ ಹಿಡಿದುಕೊಂಡಿದ್ದು ಮುಂದೆ ಪಾಲಿಕೆಯ ಕಥೆ ಯಾವ ಮಟ್ಟಕ್ಕೆ ತಲುಪಲಿ ಇದೆ ಎಂದು ಕಾದು ನೋಡಬೇಕಿದೆ.
ಮೇಯರ್ ಸ್ಥಾನದಲ್ಲಿರುವ ನಂದೀಶ್ ಅವರು ತಾರತಮ್ಯ ಮಾಡಿದ್ದಾರೆ ಎಂದು ಕೆಲವೇ ತಿಂಗಳಗಳಲ್ಲಿ ಮೇಯರ್ ಸ್ಥಾನದಿಂದ ಹಿಳಿದು ನಮ್ಮ ಸ್ಥಾನದಲ್ಲಿ ಬಂದು ಕೊಡಬೇಕಾಗುತ್ತದೆ ಅಂದಿನ ತಮ್ಮ ಪರಿಸ್ಥಿತಿ ಕೂಡ ನಮ್ಮಂತೆ ಆಗುತ್ತದೆ ಎಂದು ಕಠೋರವಾಗಿ ಎಚ್ಚರ ನೀಡಿದ್ದು ಸಭೆಯಲ್ಲಿ ಒಂದಿಷ್ಟು ಚಿಂತನೆ ಮಾಡುವಂತಹ ವಾತಾವರಣ ಸೃಷ್ಟಿಯಾಗಿತ್ತು .
ಇದೆ ಸಂದರ್ಭದಲ್ಲಿ ಇಬ್ರಾಹಿಂ ಬಾಬು ಅವರು ಈಶ್ವರ್ ದೇವಾಲಯ ರಸ್ತೆ ಡಾಂಬರೀಕರಣ ಕುಂಡಿ ಮುಚ್ಚುವ ಕಾಮಗಾರಿ ಕಳಪೆಯಾಗಿದ್ದು ಅಲ್ಲಿಯ ಕೆಲವು ಚಿತ್ರಗಳು,ಸುದ್ದಿಆಗಿದ್ದು ಇಂತಹ ಕಾಮಗಾರಿಯನ್ನು ಯಾಕೆ ಮಾಡಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ತರತೂರಿ ಕಾಮಗಾರಿ ಮಾಡಲಾಗಿದೆ ಎಂದು ಅದನ್ನು ಸರಿಪಡಿಸ್ತೀವಿ ಎಂದು ಕಮಿಷನರ್ ಮತ್ತು ಮೇಯರ್ ಸಮಾಧಾನ ಕೊಟ್ಟರು. ಪಾಲಿಕೆ ಸದಸ್ಯರು "ಇಂಡೋರ್" ಪ್ರಯಾಣ ರೈಲ ಅಥವಾ ವಿಮಾನ ಎನ್ನುವುದು ಚರ್ಚೆ ಅಲ್ಲಿ ಕಾಮಗಾರಿಗಳನ್ನು ನೋಡಿ ಪಾಲಿಕೆಯನ್ನು ಆವೃದ್ದಿ ಪಡಿಸಬೇಕು ಅಂದ ಮೇಯರ್. ಸದಸ್ಯರಗೆ ಸಂಬಳ ಜಾಸ್ತಿ ಆಗ್ಬೇಕು ಎಂದ್ರು ಮಹಿಳಾ ಸದಸ್ಯರು.ಪ್ಲಾಸ್ಟಿಕ್ ಬಳಿಕೆ ನಿಷೇದ ಅಂದ್ರು ಮೇಯರ್, ಪಾಲಿಕೆ ಸಭೆಯ ಊಟ ದಲ್ಲಿ ಹೋಳಿಗೆ ಗೆ , ಪಾನ್ ಬೀಡಾ ಗೆ ವಾಟರ್ ಬಾಟಲ್ ಗಳು ಪ್ಲಾಸ್ಟಿಕ್ ಇದ್ದವು!!.

[video width="848" height="478" mp4="https://news9today.in/wp-content/uploads/2025/03/VID-20250304-WA0003.mp4"][/video]