Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಿಲ್ಲಾಧಿಕಾರಿ ಗಳು ಮುಖ್ಯಸ್ಥರು!! ಸರ್ಕಾರದ ಅನುಬಂಧ ಸಂಸ್ಥೆಯ ಅಧಿಕಾರಿ, ಪ್ರತಿ ತಿಂಗಳು ಕೈ ತುಂಬಾ ಸಂಬಳ, M.tech.

ಜಿಲ್ಲಾಧಿಕಾರಿ ಗಳು ಮುಖ್ಯಸ್ಥರು!!
ಸರ್ಕಾರದ ಅನುಬಂಧ ಸಂಸ್ಥೆಯ ಅಧಿಕಾರಿ, ಪ್ರತಿ ತಿಂಗಳು ಕೈ ತುಂಬಾ ಸಂಬಳ, M.tech. ಪರೀಕ್ಷೆ exam,ಬರೆದು, ಗೊಂದಲ ಸೃಷ್ಟಿ ಮಾಡಿದ್ದ ಭೂಪ. ರೂಲ್ಸ್ ಗಾಳಿ ಗೆ ಬಿಟ್ಟಿದಯಾ ಹೆಸರು ಹೊಂದಿರುವಕಾಲೇಜು, ಸಂಸ್ಥೆ??.

ಬಳ್ಳಾರಿ (3)ನಿರ್ಮಿತಿ ಕೇಂದ್ರದ ಪ್ರಭಾರಿ ನಿರ್ದೇಶಕರು,
ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಅಧಿಕಾರಿ ಸರ್ಕಾರದ ಅನುಬಂಧ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ!

ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿ,
ಕಾಲೇಜಿನಲ್ಲಿ ಓದುವ ವಿದ್ಯಾರ್ಥಿ!! ಯಾಗಿ ಕೆಲಸದಲ್ಲಿಯೂ ರಜೆ ಇಲ್ಲ... ಕಾಲೇಜಿನಲ್ಲಿಯೂ ರಜೆ ಇಲ್ಲ... ಒಂದೇ ಸಮಯದಲ್ಲಿ ಎರಡು ಕಡೆ ಹಾಜರಾತಿ ಕಡ್ಡಾಯವಾಗಿ ಇರುತ್ತಾನೆಂದು ದಾಖಲಾತಿ ಹೇಳುತ್ತೆ, ಆದರೆ ವಾಸ್ತವತೆಯಲ್ಲಿ ಈತನು ಒಂದು ಕಡೆ ಮಾತ್ರ ಹಾಜರು ಇರುತ್ತಾನೆ.

ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಅಧಿಕಾರಿಯು ಏಕಕಾಲದಲ್ಲಿ ಎರಡು ಕೆಲಸ ನಿರ್ವಹಿಸುತ್ತಿದ್ದಾನೆ! ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಯಾದರೆ, ಕಾಲೇಜಿನಲ್ಲಿ ಓದುವ ವಿದ್ಯಾರ್ಥಿ!! ಕೆಲಸದಲ್ಲಿಯೂ ರಜೆ ಇಲ್ಲ... ಕಾಲೇಜಿನಲ್ಲಿಯೂ ರಜೆ ಇಲ್ಲ... ಒಂದೇ ಸಮಯದಲ್ಲಿ ಎರಡು ಕಡೆ ಹಾಜರಾತಿ ಕಡ್ಡಾಯವಾಗಿ ಇರುತ್ತಾನೆಂದು ದಾಖಲಾತಿ ಹೇಳುತ್ತೆ, ಆದರೆ ವಾಸ್ತವತೆಯಲ್ಲಿ ಈತನು ಒಂದು ಕಡೆ ಮಾತ್ರ ಹಾಜರು ಇರುತ್ತಾನೆ.

ಗುತ್ತಿಗೆ ಆಧಾರದಲ್ಲಿ ನಿರ್ಮಿತಿ ಕೇಂದ್ರದಲ್ಲಿ ಪ್ರಭಾರಿ ಯೋಜನಾ ನಿರ್ದೇಶಕರಾಗಿ ಕೆಲಸ ಮಾಡುವ ವೀರೇಶ್ ವಿ. ಅವರು ಒಂದೇ ಸಮಯದಲ್ಲಿ ಓದುವದು ಮತ್ತು ಕೆಲಸ ಮಾಡುವ ಅಧಿಕಾರಿಯಾಗಿದ್ದಾರೆ.

ಎಂಜಿನೀಯರ್ ಪದವೀಧರರಾಗಿರುವ ವೀರೇಶ್ ಅವರು ಸಂಡೂರ್ ಯಲ್ಲಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ಯಾಗಿ ಕೆಲಸ ವನ್ನು ಮಾಡುತಾ ಇದ್ದರು.

ಕಳೆದ ಕೆಲ ತಿಂಗಳು ಗಳು ಹಿಂದೆ ಇಲ್ಲಿಯಾ ಅಧಿಕಾರಿ ಮೋಹನ್ ಕೃಷ್ಣ ವರ್ಗಾವಣೆ ಆಗಿದ್ದರು.

ಖಾಲಿ ಇರುವ ಸ್ಥಾನ ಕ್ಕೆ ಕಳೆದ ಮೇ ತಿಂಗಳಲ್ಲಿ ಪ್ರೊಜೆಕ್ಟ್ ಡೈರೆಕ್ಟರ್ ಯಾಗಿ ಮೇ ತಿಂಗಳಿಂದ ನಿರ್ಮಿತಿ ಕೇಂದ್ರದ ಪ್ರಭಾರಿ ಯೋಜನಾ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾನೆ.

ನಿರ್ಮಿತಿ ಕೇಂದ್ರ ಎಂದರೆ ಸರಕಾರಿ ಕಾಮಗಾರಿಗಳನ್ನು ನಿರ್ವಹಿಸುವ ಸರಕಾರ ಏಜೆನ್ಸಿಯಾಗಿದೆ.

ಪ್ರತಿ ಜಿಲ್ಲೆಯಲ್ಲಿ ನಿರ್ಮಿತಿ ಕೇಂದ್ರವನ್ನು ಮುನ್ನಡೆಸಲು ಓರ್ವ ಎಂಜಿನೀಯರನ್ನು ಯೋಜನಾ ನಿರ್ದೇಶಕ ರನ್ನಾಗಿ ಮಾಡಿಕೊಂಡು ಕೇಂದ್ರದ ಆಡಳಿತವನ್ನು ನಡೆಸುತ್ತಾರೆ.

ಸರಕಾರದ ಕೆಲವೊಂದು ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರವೇ ನಿರ್ವಹಿಸುತ್ತಿದೆ.

ವೀರೇಶ್ ಅವರು ಎಂಟೆಕ್ ಮಾಡುತ್ತಿರುವುದು ಸಂತೋಷದ ವಿಚಾರವೇ.

ವಿದ್ಯಾಭ್ಯಾಸಕ್ಕೆ ಅನುಮತಿ ಕಡ್ಡಾಯ:

ಸರಕಾರಿ ಇಲಾಖೆ ಮತ್ತು ಸಂಸೆಗಳಲ್ಲಿ ಕೆಲಸ
ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳು ತಾವು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆಂದರೆ ಕ್ವಾಲಿಟಿ ಇಂಪ್ಯೂಮೆಂಟ್ ಪ್ರೊಗ್ರಾಂ ಅಡಿಯಲ್ಲಿ ಮೇಲಾಧಿಕಾರಿಗಳಿಗೆ ಅನುಮತಿ ಪಡೆಯಬೇಕಾಗುತ್ತದೆ.

ಆದರೆ ವೀರೇಶ್‌ ಅವರು ಅನುಮತಿ ಪಡೆದಿದ್ದರೆ, ನಿರ್ಮಿತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿರಲಿಲ್ಲ, ಲಭ್ಯವಾಗಿರುವ ದಾಖಲೆಗಳ ಪ್ರಕಾರ ಮೇಲ್ನೋಟಕ್ಕೆ ಯಾವುದೇ ಅನುಮತಿ ಪಡೆಯದೆ ವಿದ್ಯಾಬ್ಯಾಸ ಮಾಡುವುದು ಕಂಡು ಬರುತ್ತದೆ.

ಹಾಜರಾತಿ ಕಡ್ಡಾಯ ಎನ್ನುತ್ತಿದೆ ವಿಟಿಯು ನಿಯಮ:

ಎಂಜಿನೀಯರಿಂಗ್ ನಲ್ಲಿ ಎಕ್ಸ್‌ಟ್ರನಲ್ ಕಟ್ಟಿಕೊಂಡು ಓದುವುದಕ್ಕೆ ಅವಕಾಶವಿದೆ.

ಆದರೆ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜ್ಯುಕೇಷನ್ (ಎಐಸಿಟಿಇ) ಅವರು ಅನುಮೋದಿಸುವ ಕೋರ್ಸ್‌ಗಳಿಗೆ ಮಾತ್ರ ಅವಕಾಶವಿದೆ.

ಆದರೆ ವೀರೇಶ್ ಅವರು ಮಾಡುತ್ತಿರುವ ಎಂಟೆಕ್ ನ ಎಸ್‌ಸಿಎಸ್‌ಗೆ ಕೋರ್ಸ್‌ಗೆ ಕಡ್ಡಾಯವಾಗಿ ಹಾಜರಾಗಲೇಬೇಕೆಂಬ ವಿಟಿಯು ನಿಯಮವಿದೆ.

ಇದು ಎರಡು ವರ್ಷದ ನಾಲ್ಕು ಸೆಮಿಸ್ಟರನ್ನು ಹೊಂದಿರುವ ಕೋರ್ಸ್.

ಲಭ್ಯವಾಗಿರುವ ಮಾಹಿತಿ ಮತ್ತು ದಾಖಲೆಗಳ ಪ್ರಕಾರ ಇವರು ನಿರ್ಮಿತಿ ಕೇಂದ್ರದಲ್ಲಿ ಕೆಲಸ ಮಾಡುತ್ತಾ ಮತ್ತು ಎಂಟೆಕ್ ಮಾಡುತ್ತಿರುವುದು ಕಂಡು ಬಂದಿದೆ,

ಸರಕಾರಿ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಾ ಕೈ ತುಂಬ ಸಂಬಂಳ ಪಡೆಯುವ ವೀರೇಶ್ ಅವರು ಎಂಟೆಕ್ ಮಾಡುತ್ತಿದ್ದಾರೆ.

ನಿಯಮ ಉಲ್ಲಂಘಿಸಿ ವಿದ್ಯಾಭ್ಯಾಸ ಮಾಡುತ್ತಾ, ಕೆಲಸ ನಿರ್ವಹಿಸುವುದು ಎಷ್ಟು ಸರಿ, ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ಇಲ್ಲವೇ? ರೆಗುಲರ್‌ ತರಗತಿಗೆ ಹಾಜರಾಗದೆ ಇದ್ದರೂ, ಎಂಜಿನೀಯರಿಂಗ್ ಕಾಲೇಜಿನಲ್ಲಿ ಇವರನ್ನು ಹೇಗೆ ತಾನೆ ದಾಖಲಾತಿ ಮಾಡಿಕೊಂಡಿದ್ದಾರೆಂಬುದು ಸಂಬಂಧ ಪಟ್ಟ ಅಧಿಕಾರಿಗಳು ಉತ್ತರಿಸಬೇಕಾಗುತ್ತದೆ. ಆದರೇ ಸೋಮವಾರ 1/9/2025ರಂದು ಅವರು ವಿ.ವಿ ಸಂಘದ RYMC,ಇಂಜಿನಿಯರಿಂಗ್ ಕಾಲೇಜ್ ಯಲ್ಲಿ ಪರೀಕ್ಷೆ ಬರಿದಿದ್ದಾರೇ. ಬಳ್ಳಾರಿ ಯಾ ನಿರ್ಮಿತಿ ಕೇಂದ್ರ ಕ್ಕೆ ಜಿಲ್ಲಾ ಅಧಿಕಾರಿಗಳು, ಬಾಸ್ ಇದ್ದಾರೆ!. ಈರೀತಿ ದಾರಿ ತಪ್ಪಿಸಿ ಎಕ್ಸಾಮ್ ಗೆ ಹೋಗಿದ್ದು, ಎಷ್ಟು ಸರಿ,ಕಾಲೇಜ್ ಗಳ ಗುಣ ಮಟ್ಟ ಏನು??. ಇದು ಒಂದು ರೇತಿಯಲ್ಲಿ ಮಾಫಿಯ್ ಅನ್ನುತ್ತಾರೆ, ಬುದ್ದಿಜೀವಿಗಳು. ಕಷ್ಟ ಪಟ್ಟು ರೆಗ್ಯುಲರ್ ಹೋಗುವ ವಿದ್ಯಾರ್ಥಿಗಳ ಆಕ್ರೋಶ, ಯಾವ ಮಟ್ಟಕ್ಕೆ ತಲುಪುತ್ತೆ ಅನ್ನವದು, ಪ್ರಶ್ನೆ ಆಗಿದೆ.

ಇದರ ಅಸಲಿ ಕಥೆ ಏನು ಕಾದು ನೋಡಬೇಕು..

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.