
ಬಳ್ಳಾರಿ(31)ಗಂಗಾವತಿ ತಾಲೂಕಿನ ಐತಿಹಾಸಿಕ ತಾಣವಾದ ಶ್ರೀ ಪಂಪಾ ಸರೋವರದಲ್ಲಿ
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಶ್ರೀ ಗಾಲಿ ಜನಾರ್ದನ ರೆಡ್ಡಿಯವರು ಮತ್ತು ಪತ್ನಿ ಶ್ರೀಮತಿ ಲಕ್ಷ್ಮಿಅರುಣಾ, ಪುತ್ರಿ ಬ್ರಹ್ಮಿಣಿ ರೆಡ್ಡಿಯವರು ಪ್ರಸಿದ್ಧ ಪಂಪಾ ಸರೋವರದ ಶ್ರೀವಿಜಯಲಕ್ಷ್ಮಿ ದೇವಿ ಮತ್ತು ಪರಮಶಿವ ಮತ್ತು ಮಹಿಷಾಸುರ ಮರ್ದಿನಿ ಹಾಗು ವಿಜಯನಗರದ ವಿದ್ಯಾರಣ್ಯ ಗುರುಗಳಿಗೆ ಪೂಜೆ ಸಲ್ಲಿಸಿಲಾಯಿತು.
ಕಂಚಿ ವಾದ್ಯ ಮೇಳದೊಂದಿಗೆ ಪ್ರಾರಂಭಗೊಂಡು ಪ್ರಥಮವಾಗಿ ಗಣಪತಿ ಪೂಜೆ ನಂತರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಚಾರ ವಾಹನ ಕಲ್ಯಾಣ ರಥಕ್ಕೆ ಪೂಜೆ ಸಲ್ಲಿಸಲಾಯಿತು. ಬಳ್ಳಾರಿಯ ಬಹುತೇಕ ಅಧ್ಯಕ್ಷರು ಸಾವಿರಾರು ಅಭಿಮಾನಿಗಳು ಪಕ್ಷದ ಕಾರ್ಯಕರ್ತರು, ದೊಡ್ಡ ಮಟ್ಟದಲ್ಲಿ ಪಾಲ್ಗೊಂಡಿದ್ದರು. ಇದೆ ದಿನ ಬಳ್ಳಾರಿಯ ಅಭ್ಯರ್ಥಿ ಹೆಸರನ್ನು ಅಧಿಕೃತ ವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ. ಕೆಲವೇ ದಿನಗಳಲ್ಲಿ ಪಕ್ಷದ ಚಿನ್ಹೆ ಬರುತ್ತದೆ. ಬಹುತೇಕ ಫ್ಯಾನ್ ಗುರುತು ಬರುವ ಸಾಧ್ಯತೆ ಇದೇ,ಏಂದು ಅಭಿಮಾನಿಗಳ ಅಭಿಪ್ರಾಯ ಅಗಿದೆ.
(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ)
[video width="640" height="352" mp4="https://news9today.in/wp-content/uploads/2023/01/VID-20230131-WA0000.mp4"][/video]